Advertisement

ರಬಕವಿ-ಬನಹಟ್ಟಿ: ತೋಳದ ದಾಳಿಗೆ 8 ಮೇಕೆಗಳು ಬಲಿ

06:37 PM Jun 12, 2022 | Team Udayavani |

ರಬಕವಿ-ಬನಹಟ್ಟಿ: ಒಂದೇ ರಾತ್ರಿಯಲ್ಲಿ ಮೂವರ ಬೇರೆ ಬೇರೆ ರೈತರ ಹೊಲದಲ್ಲಿ ತೋಳವೊಂದು ಹೋಗಿ 8 ಮೇಕೆಗಳನ್ನು ಬಲಿ ತೆಗೆದುಕೊಂಡ ಘಟನೆ ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಹಣಮಂತ ಬೀರಪ್ಪ ನ್ಯಾಮಗೌಡ ಎಂಬುವರ ಹೊಲದಲ್ಲಿ ಇದ್ದ ನಾಲ್ಕು ಮೇಕೆಗಳನ್ನು ತಿಂದು ಪ್ರಾಣ ತೆಗೆದಿದೆ. ಅದೇ ರೀತಿ ಪಕ್ಕದಲ್ಲಿ ಇದ್ದ ರಾಮಪ್ಪ ತಂಬಾಕು ಅವರ ಒಂದು ಮೇಕೆಯನ್ನು ತಿಂದು ಮತ್ತು ಶ್ರೀಶೈಲ ಶಿವಗೊಂಡಪ್ಪ ಕಂಕಣವಾಡಿ ಅವರ ಮೂರು ಮೇಕೆಗಳು ಅದೇ ಒಂದೇ ದಿನ ಸಾವನ್ನಪ್ಪಿದ ಘಟನೆ ಇದು ರೈತರಿಗೆ ತುಂಬಾ ತಲೆನೋವುಂಟು ಮಾಡಿದೆ.

ನೆರೆಯ ಹಿಪ್ಪರಗಿ ಗ್ರಾಮದಲ್ಲಿ ಇದಕ್ಕಿಂತ ಒಂದು ದಿನದ ಮುಂಚೆ ಶಂಕರಗೌಡ ಪಾಟೀಲ ಎಂಬುವರ ಹದಿನೆಂಟು ಮೇಕೆಗಳನ್ನು ತಿಂದು ಪ್ರಾಣ ಹಾನಿ ಮಾಡಿದ ಘಟನೆ ನಡೆದಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ ಮಲ್ಲು ನಾವಿ, ಮಹಾವೀರ ಆಲಗೂರ ಕಂದಾಯ ಹಾಗು ಪಶು ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ಮುತ್ತಪ್ಪಾ ಮುಚಕಣ್ಣವರ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸರ್ಕಾರದಿಂದ ಪರಿಹಾರಕ್ಕೆ ಬೇಕಾದ ದಾಖಲಾತಿಗಳನ್ನು ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next