Advertisement
ನಾಡಿನ ಕಲೆ, ಸಂಸ್ಕೃತಿಗೆ ಸಾಕ್ಷಿಯಾಗುತ್ತಿದ್ದ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆ ಈ ಬಾರಿ ಅವ್ಯವಸ್ಥೆಯ ಆಗರವಾಗುವ ಜತೆಗೆ ಭಾರೀ ಭದ್ರತಾ ಲೋಪ ಕಂಡುಬಂತು. ಪ್ರತಿವರ್ಷ ಪೊಲೀಸ್ ಸರ್ಪಗಾವಲಿನಲ್ಲಿ ಸಾಗುತ್ತಿದ್ದ ಮೆರವಣಿಗೆಯಲ್ಲಿ ಪೊಲೀಸರಿಗಿಂತ ಅನಗತ್ಯವಾಗಿ ಓಡಾಡುತ್ತಿದ್ದವರೇ ಹೆಚ್ಚಾಗಿ ಕಾಣಿಸಿಕೊಂಡರು.
Related Articles
Advertisement
ಸುಮ್ಮನಾದ ಕಲಾವಿದರು: ಅಧಿಕಾರಿಗಳ ಎಡವಟ್ಟಿನಿಂದಾಗಿ ಮೆರವಣಿಗೆಯಲ್ಲಿ ಉಂಟಾದ ಅವ್ಯವಸ್ಥೆಯಿಂದಾಗಿ ಮೆರವಣಿಗೆಯಲ್ಲಿ ಸಾಗಿದ ಕಲಾವಿದರು ನಿರುತ್ಸಾಹದಿಂದ ಹೆಜ್ಜೆಹಾಕಿದರು. ಮೆರವಣಿಗೆಯ ಆರಂಭದಲ್ಲಿ ಹೊರಟಿದ್ದ ಸಾಕಷ್ಟು ಕಲಾತಂಡಗಳು, ಸ್ತಬ್ಧಚಿತ್ರಗಳು ಆಯುರ್ವೇದ ವೃತ್ತದಿಂದ ಕೂಗಳತೆ ದೂರದಲ್ಲಿ ಸಾಗುತ್ತಿದ್ದಂತೆ ಅಂಬಾರಿ ಹೊತ್ತ ಅರ್ಜುನ ಆಯುರ್ವೇದ ವೃತ್ತ ತಲುಪಿದ್ದ.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು, ಅಧಿಕಾರಿಗಳು ಕಲಾತಂಡಗಳು ಮತ್ತು ಸ್ತಬ್ಧಚಿತ್ರಗಳಿಗೆ ವೇಗವಾಗಿ ಚಲಿಸುವಂತೆ ಸೂಚಿಸಿದರು. ಇದರಿಂದಾಗಿ ಕಲಾವಿದರು ಯಾವುದೇ ಪ್ರದರ್ಶನ ನೀಡದೆ, ತರಾತುರಿಯಲ್ಲಿ ಬನ್ನಿಮಂಟಪದ ಸಾಗಿದರು. ಇನ್ನು ಕೆಲವೊಂದು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ ಆಗಮಿಸಿದ ಅಂಬಾರಿ ಆನೆ, ಸ್ತಬ್ಧ ಚಿತ್ರಗಳ ನಡುವೆಯೇ ಸಾಗಿತು.
ಮೈಮರೆತ ಪೊಲೀಸರು: ಚಿನ್ನದ ಅಂಬಾರಿ ಹೊತ್ತ ಅರ್ಜುನ ಮೆರವಣಿಗೆಯಲ್ಲಿ ಆಗಮಿಸುತ್ತಿದ್ದಂತೆ ನೂರಾರು ಮಂದಿ ರಸ್ತೆಗಿಳಿದು ಮನಬಂದಂತೆ ಅಡ್ಡಾಡುತ್ತಿದ್ದರು. ಅತ್ಯಂತ ಭದ್ರತೆಯಲ್ಲಿ ಸಾಗಬೇಕಿದ್ದ ಮೆರವಣಿಗೆಯಲ್ಲಿ ಇಷೆಲ್ಲಾ ಅವ್ಯವಸ್ಥೆ ಕಂಡುಬಂದರೂ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ
ಪೊಲೀಸರು ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ತಮ್ಮಷ್ಟಕ್ಕೆ ಮೆರವಣಿಗೆ ವೀಕ್ಷಿಸುತ್ತಾ, ಮೊಬೈಲ್ ಫೋನಿನಲ್ಲಿ ಫೋಟೋ, ವಿಡಿಯೋ ತೆಗೆಯುವುದರಲ್ಲಿ ನಿರತರಾಗಿದ್ದರು. ಇನ್ನೂ ಇಡೀ ಜಂಬೂಸವಾರಿ ಮೆರವಣಿಗೆಯಲ್ಲಿ ಕಾಣಿಸಿದ ಅವ್ಯವಸ್ಥೆಯಿಂದಾಗಿ ಜಂಬೂಸವಾರಿ ವೀಕ್ಷಿಸಲು ಗಂಟೆಗಟ್ಟಲೆ ಕಾದುಕುಳಿದ್ದ ಸಾರ್ವಜನಿಕರು ಅಸಮಾಧಾನಗೊಂಡರು.