Advertisement

ತೀಸ್ತಾ ಸೆಟಲ್ವಾಡ್‌ ಪದ್ಮಶ್ರೀ ಹಿಂಪಡೆಯಬೇಕು: ನರೋತ್ತಮ್‌ ಮಿಶ್ರಾ

10:26 PM Jun 28, 2022 | Team Udayavani |

ಭೋಪಾಲ್‌: 2002ರ ಗುಜರಾತ್‌ ದಂಗೆಗಳಲ್ಲಿ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದ ಆರೋಪದಡಿ ಬಂಧಿಸಲ್ಪಟ್ಟಿರುವ ಗುಜರಾತ್‌ನ ಸಮಾಜ ಸೇವಕಿ ತೀಸ್ತಾ ಸೆಟಲ್ವಾಡ್‌ ಅವರಿಗೆ ಈ ಹಿಂದೆ ನೀಡಲಾಗಿರುವ ಪದ್ಮಶ್ರೀ ಗೌರವವನ್ನು ಹಿಂಪಡೆಯಬೇಕು ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್‌ ಮಿಶ್ರಾ ಆಗ್ರಹಿಸಿದ್ದಾರೆ.

Advertisement

2007ರಲ್ಲಿ ಕೇಂದ್ರ ಸರ್ಕಾರ, ತೀಸ್ತಾರಿಗೆ ಪದ್ಮಶ್ರೀಯನ್ನು ನೀಡಿ ಗೌರವಿಸಿತ್ತು. ಮಂಗಳವಾರ, ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, “ಕೇಂದ್ರದಲ್ಲಿ ಈ ಹಿಂದಿದ್ದ ಕಾಂಗ್ರೆಸ್‌ ಸರ್ಕಾರ, ಅಲ್ಪಸಂಖ್ಯಾತರನ್ನು ಓಲೈಸುವುದಕ್ಕಾಗಿ ತೀಸ್ತಾ ಅವರಿಗೆ ಪದ್ಮಶ್ರೀ ನೀಡಿತ್ತು.

ವರ್ಷಗಳ ಹಿಂದೆ ನಡೆದಿದ್ದ ಅವಾರ್ಡ್‌ ವಾಪಸಿ ಅಭಿಯಾನದಲ್ಲೂ ಕೈ ಜೋಡಿಸಿದ್ದರು ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next