Advertisement

ಬಿಜೆಪಿ ಕಚೇರಿ ಎದುರು ವಾಮಾಚಾರ

07:25 AM Mar 29, 2018 | Team Udayavani |

ಧಾರವಾಡ: ಬಿಜೆಪಿ ಕಚೇರಿ ಎದುರು ಹಾಗೂ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷರ ವಾಹನಕ್ಕೆ ವಾಮಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ.

Advertisement

ಸುಭಾಷ ರಸ್ತೆಯ ಬಿಜೆಪಿ ಶಹರ ಘಟಕದ ಕಚೇರಿ ಎದುರು ವಾಮಾಚಾರ ಮಾಡಿಸಿ ಗೊಂಬೆಯೊಂದನ್ನು ಕಟ್ಟಲಾಗಿದೆ. ಬುಧವಾರ ಬೆಳಗ್ಗೆ ಕಚೇರಿಯಲ್ಲಿ ಯುವ ಮೋರ್ಚಾ ಸಭೆ ನಿಮಿತ್ತ ಕಚೇರಿ ಬಾಗಿಲು ತೆರೆಯುವಾಗ ಇದು ಬೆಳಕಿಗೆ ಬಂದಿದೆ. ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಈರಣ್ಣ ಜಡಿ ಅವರ ಕಾರಿನ ಮುಂಭಾಗದಲ್ಲಿ ಲಿಂಬೆ ಹಣ್ಣು ಹಾಗೂ ತಾಯತವನ್ನು ಕಟ್ಟಿ ವಾಮಾಚಾರ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next