Advertisement

“ಚಳಿಗಾಲ ಅಧಿವೇಶನ ಅತಿ ಕಡಿಮೆ ಫ‌ಲಪ್ರದ’

12:30 AM Jan 11, 2019 | Team Udayavani |

ಹೊಸದಿಲ್ಲಿ: ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯ ಕಲಾಪಗಳು ಶೇ. 47ರಷ್ಟು ಫ‌ಲಪ್ರದವಾಗಿದ್ದರೆ, ರಾಜ್ಯಸಭೆಯ ಕಲಾಪಗಳು ಶೇ. 27ರಷ್ಟು ಫ‌ಲದಾಯಕವಾಗಿದ್ದವು ಎಂದು ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್‌ ತೋಮರ್‌ ಗುರುವಾರ ತಿಳಿಸಿದ್ದಾರೆ. ಇವುಗಳಲ್ಲಿ ಸಾಮಾನ್ಯ ವರ್ಗಕ್ಕೆ ಶೇ. 10ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯು ಲೋಕಸಭೆ, ರಾಜ್ಯಗಳಲ್ಲಿ ಅಂಗೀಕಾರಗೊಂಡಿದ್ದು ವಿಶೇಷ ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಲೋಕಸಭೆ 29 ದಿನಗಳ ಕಾಲ 17 ಸಿಟ್ಟಿಂಗ್‌ಗಳನ್ನು ನಡೆಸಿದ್ದರೆ, ರಾಜ್ಯಸಭೆ 30 ದಿನಗಳಲ್ಲಿ 18 ಸಿಟ್ಟಿಂಗ್‌ಗಳನ್ನು ನಡೆಸಿದೆ. ಲೋಕಸಭೆಯಲ್ಲಿ 12, ರಾಜ್ಯಸಭೆ ಯಲ್ಲಿ 5 ವಿಧೇಯಕಗಳನ್ನು ಮಂಡಿಸಲಾಗಿದೆ. 5 ವಿಧೇಯಕಗಳನ್ನು ಅಂಗೀಕರಿಸಿವೆ. ರಾಜ್ಯ ಸಭೆಯಿಂದ 4 ವಿಧೇಯಕಗಳನ್ನು ಹಿಂಪಡೆ ಯಲಾಗಿದೆ.  ಇದು 16ನೇ ಲೋಕಸಭೆಯ ಅವಧಿಯಲ್ಲೇ ಅತಿ ಕಡಿಮೆ ಫ‌ಲಪ್ರದ ಅಧಿವೇಶನ ವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next