Advertisement
ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಭುವನೇಶ್ವರಿದೇವಿ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಸತತವಾಗಿ ಕಳೆದ ಮೂರು ವರ್ಷಗಳಿಂದ ಕಂಗೆಟ್ಟಿರುವ ರೈತ ಮುಂದೆ ನೆಮ್ಮದಿಯಿಂದ ಇರಬೇಕು. ರಾಜ್ಯದ ನೀರಾವರಿ ಹಾಗೂ ವಿದ್ಯುತ್ ಕೆಲಸಗಳು ಪೂರ್ಣವಾಗಬೇಕು.
Related Articles
Advertisement
ಅವರು ಅಧಿಕಾರಕ್ಕೆ ಬಂದ ತಕ್ಷಣ ರೈತರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ ಎಂದರು. ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ದೇಶದಲ್ಲಿಯೇ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ ಹಾಗೂ ಸಾಲ ಮನ್ನಾ ಮಾಡಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಶಾಸಕ ಗೋವಿಂದ ಕಾರಜೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ವ ಜನಾಂಗ ಮೆಚ್ಚುವಂತಹ ಕೆಲಸ ಮಾಡಿದ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಅವರ ಕೈಯನ್ನು ಜನರು ಬಲಪಡಿಸಬೇಕು ಎಂದರು. ಇಂಗಳಗಿ-ಯಡಹಳ್ಳಿಯ ರೇವಣಸಿದ್ಧ ಶಿವಾಚಾರ್ಯರು, ನಿಜಗುಣದೇವರು ಹಾಗೂ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ, ಜಿ.ಎಸ್. ನ್ಯಾಮಗೌಡ, ಆರ್.ಎಸ್. ತಳೇವಾಡ, ಆರ್.ಟಿ. ಪಾಟೀಲ, ಬಿ.ಜಿ. ಪಾಟೀಲ, ರತ್ನಕ್ಕಾ ತಳೇವಾಡ, ಬಿ.ಎಚ್. ಪಂಚಗಾವಿ, ಕೆ.ಆರ್. ಮಾಚಪ್ಪನವರ, ಕೆ.ಟಿ. ಪಾಟೀಲ, ಎಸ್.ಎಸ್. ಇಮ್ಮಣ್ಣವರ, ಶೋಭಾ ಪಾಟೀಲ, ತುಳಜಾಬಾಯಿ ಶಿರಬೂರ, ರಮೇಶ ಪಂಚಕಟ್ಟಿಮಠ, ದೊಡ್ಡನಗೌಡ ಪಾಟೀಲ, ಲಕ್ಷ್ಮಣ ಚಿನ್ನಣ್ಣವರ ಸೇರಿದಂತೆ ಜೈ ಕರ್ನಾಟಕ ಯುವಕ ಸಂಘ, ಗ್ರಾಪಂ ಹಾಗೂ ಪಿಕೆಪಿಎಸ್ನ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಹಾಂತೇಶ ಸಬರದ ಸ್ವಾಗತಿಸಿದರು. ಎಲ್.ಎಸ್. ಚಿನ್ನಣ್ಣವರ ವಂದಿಸಿದರು.