Advertisement

ಆಪ್‌ನಿಂದ ಆಹ್ವಾನ: ಯಾವ ಪಕ್ಷ ಸೇರಲಿದ್ದಾರೆ ಪರಿಕ್ರರ್ ಪುತ್ರ ?

05:52 PM Jan 20, 2022 | Team Udayavani |

ಪಣಜಿ : ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಮಾಜಿ ಸಿಎಂ ದಿ.ಮನೋಹರ್ ಪರ್ರಿಕರ್ ಪುತ್ರ ಉತ್ಪಲ್ ಯಾವ ಪಕ್ಷ ಸೇರಲಿದ್ದಾರೆ ?ಇಂಥದೊಂದು ಕುತೂಹಲ ಈಗ ಗೋವಾ ಚುನಾವಣಾ ಅಖಾಡದಲ್ಲಿ ಸೃಷ್ಟಿಯಾಗಿದೆ.

Advertisement

ಬಿಜೆಪಿಯಿಂದ ಚುನಾವಣಾ ಕಣಕ್ಕೆ ಇಳಿಯಲು ಬಯಸಿದ್ದ ಉತ್ಪಲ್ ಅವರಿಗೆ ಈ ಬಾರಿ ಪಕ್ಷ ಟಿಕೆಟ್ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅವರು ಯಾವ ಪಕ್ಷದಿಂದ ಸೆಣೆಸಬಹುದು ಎಂಬ ಪ್ರಶ್ನೆ ಉದ್ಭವವಾಗಿದೆ. ಆಮ್ ಆದ್ಮಿ, ಕಾಂಗ್ರೆಸ್ ನಿಂದಲೂ ಆಹ್ವಾನ ಬಂದಿದೆ. ಆದರೆ ಉತ್ಪಲ್ ಯಾವುದೇ ಪ್ರತಿಕ್ರಿಯೆ ಇದುವರೆಗೆ ನೀಡಿಲ್ಲ.

ಈ ಬಗ್ಗೆ ಟ್ವೀಟ್ ಮಾಡಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ , ಬಿಜೆಪಿ ಯೂಸ್ ಆಂಡ್ ಥ್ರೋ ನೀತಿಯಿಂದ ಗೋವನ್ನರು ಬೇಸರಗೊಂಡಿದ್ದಾರೆ. ಪರಿಕ್ಕರ್ ಕುಟುಂಬದ ಜತೆಗೂ ಬಿಜೆಪಿ ಈ ರೀತಿ ವರ್ತಿಸುತ್ತದೆ ಎಂದು ನಾನು ಭಾವಿಸಿರಲಿಲ್ಲ. ಪರ್ರಿಕರ್ ಬಗ್ಗೆ ನನಗೆ ಗೌರವ ಇದೆ. ಉತ್ಪಲ್ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ ಉತ್ಪಲ್ ಪರ್ರಿಕರ್ ಮನವೊಲಿಕೆಗೆ ಪ್ರಯತ್ನಗಳು ನಡೆಯುತ್ತಿದೆ. ಅವರಿಗೆ ಬೇರೆ ಕ್ಷೇತ್ರದಿಂದ ಟಿಕೆಟ್ ನೀಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next