Advertisement

‘ಭಾರತ ರತ್ನ’ವಾಜಪೇಯಿ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ: ಪಂಕಜ್ ತ್ರಿಪಾಠಿ

06:43 PM Nov 23, 2022 | Team Udayavani |

ಪಣಜಿ: ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತಾದ ‘ಭಾರತ ರತ್ನ’ ಚಲನಚಿತ್ರವನ್ನು ಇತ್ತೀಚೆಗೆ ಘೋಷಿಸಲಾಗಿದ್ದು, ನಾಯಕ ನಟನಾಗಿ ಗೌರವಾನ್ವಿತ ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕಿದ್ದು,ಆ ಪಾತ್ರಕ್ಕೆ ನ್ಯಾಯ ಒದಗಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಹಿಂದಿ ಚಿತ್ರರಂಗದ ಖ್ಯಾತ ನಟ ಹಾಗೂ ವಿವಿಧ ವೆಬ್ ಸೀರಿಸ್ ಮೂಲಕ ಕಲಾ ಲೋಕದಲ್ಲಿ ಸಂಚಲನ ಮೂಡಿಸಿದ್ದ ಖ್ಯಾತ ಕಲಾವಿದ ಪಂಕಜ್ ತ್ರಿಪಾಠಿ ಹೇಳಿದ್ದಾರೆ.

Advertisement

ಗೋವಾ ರಾಜಧಾನಿ ಪಣಜಿಯಲ್ಲಿ ನಡೆಯುತ್ತಿರುವ 53 ನೇಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉಪಸ್ಥಿತರಿದ್ದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಿಕ್ಕಿದ್ದು ವಾಜಪೇಯಿ ಅವರ ಪಾತ್ರ. ದೇಶದ ರಾಜಕೀಯ ಮತ್ತು ಸಾಮಾಜಿಕ ಉದ್ದೇಶದಲ್ಲಿ ಅವರ ಅತ್ಯುನ್ನತ ಸಾಧನೆಯಿಂದ ಉತ್ತುಂಗ ಶಿಖರಕ್ಕೇರಿದ ಅಟಲ್ ಜಿ ರವರ ಜೀವನಾಧಾರಿತ ಚಲನಚಿತ್ರವನ್ನು ನಿರ್ಮಿಸಲು ವಿನೋದ್ ಭಾನುಶಾಲಿ ಹಾಗೂ ಸಂದೀಪ ಸಿಂಗ್ ರವರು ಶ್ರಮವಹಿಸಿದ್ದಾರೆ. ‘ನಾನು ಇರಲಿ  ಅಥವಾ ಇಲ್ಲದಿರಲಿ ‘ಯೇ ದೇಶ್ ರೆಹನಾ ಚಾಹಿಯೆ’ ಎಂದು ಜನಪ್ರಿಯತೆಯ ಉತ್ತುಂಗಕ್ಕೇರಿದ ದೇಶದ ಮಹಾನ್ ಪುತ್ರ ಹಾಗೂ ಮಾಜಿ ಪ್ರಧಾನಿ ಅಟಲ್‍ಜಿ ರವರ ಚಲನಚಿತ್ರ ರೂಪದಲ್ಲಿ ಹೊರತರಲು ಹೆಚ್ಚಿನ ಪ್ರಯತ್ನ ನಡೆಸಲಾಗಿದೆ ಎಂದು ತ್ರಿಪಾಠಿ ಹೇಳಿದರು.

‘ದಿ ಅನ್‍ಟೋಲ್ಡ್ ವಾಜಪೇಯಿ: ಪೊಲಿಟಿಷಿಯನ್ ಅಂಡ್ ಪ್ಯಾರಡಾಕ್ಸ್’ ಈ ಪುಸ್ತಕವನ್ನು ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ. ವಾಜಪೇಯಿ ಅವರ ಜೀವನಾಧಾರಿತ ಚಿತ್ರವು ಖಂಡಿತವಾಗಿಯೂ ಅಭಿಮಾನಿಗಳಿಗೆ ಇಷ್ಟವಾಗುತ್ತದೆ ಎಂದು ತ್ರಿಪಾಠಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next