Advertisement

BJP ನಾಯಕಿ ವಿವಾದ: ಒವೈಸಿಗೆ 15 ನಿಮಿಷ ಬೇಕು,ನಮಗಾದ್ರೆ 15 ಸೆಕೆಂಡ್‌

12:47 AM May 10, 2024 | Team Udayavani |

ಹೈದ್ರಾಬಾದ್‌: “15 ನಿಮಿಷ ಪೊಲೀಸರನ್ನು ಸುಮ್ಮನಾಗಿಸಿದರೆ ಹಿಂದೂಗಳಿಗೆ ನಾವು ಏನು ಮಾಡುತ್ತೇವೆ ನೋಡಿ” ಎಂದು 11 ವರ್ಷಗಳ ಹಿಂದಿನ ಎಐ ಎಂಐ ಎಂ ನಾಯಕ ಅಕ್ಬರುದ್ದೀನ್‌ ಒವೈಸಿಯ ಕುಖ್ಯಾತಿ ಹೇಳಿಕೆಗೆ ಈಗ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕಿ ನವನೀತ್‌ ರಾಣಾ ಅವರು, “ನಮಗೆ ಕೇವಲ 15 ಸೆಕೆಂಡು ಸಾಕು” ಎಂದು ಹೇಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.

Advertisement

ಹೈದ್ರಾಬಾದ್‌ನಲ್ಲಿ ಎಐಎಂಐಎಂನ ಅಸಾದುದ್ದೀನ್‌ ಒವೈಸಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿರುವ ಮಾಧವಿ ಲತಾ ಪರವಾಗಿ ಪ್ರಚಾರ ಮಾಡಿದ ನವನೀತ್‌ ರಾಣಾ, “ಅಸಾದುದ್ದೀನ್‌ ಅವರ ಸಹೋದರ 15 ನಿಮಿಷ ಪೊಲೀಸರನ್ನು ತೆಗೆದು ಹಾಕಿ. ನಾವು ಏನು ಮಾಡಬಹುದು ಎಂದು ತೋರಿಸುತ್ತೇವೆ ಎನ್ನುತ್ತಾರೆ. ಅವರಿಗೆ 15 ನಿಮಿಷ ಬೇಕು, ನಮಗೆ 15 ಸೆಕೆಂಡ್‌ ಸಾಕು. ನಾವು ಏನು ಮಾಡಬಹುದು ಎಂದು ತೋರಿಸಲು” ಎಂದಿದ್ದಾರೆ.

ನವನೀತ್‌ ರಾಣಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಸಾದುದ್ದೀನ್‌ ಒವೈಸಿ, “ಪ್ರಧಾನಿಗಳೇ ಆಕೆಗೆ 15 ಸೆಕೆಂಡ್‌ ಕೊಡಿ, ಇಲ್ಲಾ ಒಂದು ತಾಸು ಕೊಡಿ, ಆಕೆ ಏನು ಮಾಡಬಹುದು ಎಂದು ನಾವು ನೋಡುತ್ತೇವೆ. ಇವರಲ್ಲಿ ಸ್ವಲ್ಪವಾದರೂ ಮಾನವೀಯತೆ ಇದೆಯೇ? ಯಾರನ್ನು ಹೆದರಿಸುತ್ತಿದ್ದೀರಿ” ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next