Advertisement

ಪ್ರಿಯಾಂಕಾ ವಾದ್ರಾ ಯಾರು? ಭದ್ರತಾ ಉಲ್ಲಂಘನೆ ವಿವರ ಅವರಿಗೇಕೆ: ಬಿಜೆಪಿ ಕಿಡಿ

11:33 AM Jan 09, 2022 | Team Udayavani |

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಂಜಾಬ್ ನಲ್ಲಿ ಎದುರಾದ ಭದ್ರತಾ ವೈಫಲ್ಯದ ಕುರಿತಾಗಿ ಬಿಜೆಪಿ ಆಕ್ರೋಶ ಮುಂದುವರಿಸಿದ್ದು, ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚೆನ್ನಿ ವಿರುದ್ಧ ಕಿಡಿ ಕಾರಿದೆ.

Advertisement

ಚೆನ್ನಿ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಘಟನೆಯ ಬಗ್ಗೆ ವಿವರ ನೀಡಿದ್ದೇನೆ ಎಂದು ನೀಡಿದ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದ್ದು, ವ್ಯಾಪಕ ಟೀಕೆಗಳು ಹರಿದು ಬಂದಿವೆ.

ಇದನ್ನೂ ಓದಿ :“ಡ್ರಾಮಾ ಸಂಸದ”  ಹೇಳಿಕೆಗೆ ಬಿಜೆಪಿ ಆಕ್ರೋಶ

ಕರ್ನಾಟಕ ಬಿಜೆಪಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಪ್ರಿಯಾಂಕಾ ವಾದ್ರಾ ಯಾರು ಎಂದು ಸೋನಿಯಾ ಗಾಂಧಿಯವರ ಪಂಜಾಬ್ ಮುಖ್ಯಮಂತ್ರಿ ರಾಷ್ಟ್ರಕ್ಕೆ ತಿಳಿಸುತ್ತಾರೆಯೇ? ಪ್ರಧಾನಿ ಮೋದಿಯವರ ಭದ್ರತಾ ಉಲ್ಲಂಘನೆಯ ಬಗ್ಗೆ ಅವರು ಏಕೆ ವಿವರಿಸಿದರು ಎಂಬುದನ್ನು ಅವರು ಭಾರತೀಯರಿಗೆ ತಿಳಿಸುತ್ತಾರೆಯೇ? ಎಂದು ಪ್ರಶ್ನಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next