Advertisement

ಭ್ರಷ್ಟಾಚಾರ ವಿಚಾರವನ್ನು ಬಿಜೆಪಿ ಬಹಳ ದೂರವಿಟ್ಟಿದೆ: ಸಚಿವ ಬಿ.ಶ್ರೀರಾಮುಲು

04:19 PM Apr 30, 2022 | Team Udayavani |

ಚಿತ್ರದುರ್ಗ: ಭ್ರಷ್ಟಾಚಾರ ವಿಚಾರವನ್ನು ಬಿಜೆಪಿ ಬಹಳ ದೂರವಿಟ್ಟಿದೆ. ಕಾಂಗ್ರೆಸ್ ಪಕ್ಷವು ಶಾಂತಿ ಕದಡುವ ಕೆಲಸ ಮಾಡುತ್ತಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಮಾತನಾಡಿದ ಅವರು, ಸಿದ್ಧಾರಾಮಯ್ಯ ಆಡಳಿತದಲ್ಲಿ ಭ್ರಷ್ಟರ ರಕ್ಷಣೆ ಮಾಡಿದ್ದಾರೆ. ಬಿಜೆಪಿ ವಿರುದ್ಧ ಸಾವಿರ ಸಲ ಸುಳ್ಳು ಹೇಳಿ ಅದನ್ನು ಸತ್ಯವೆಂದು ನಿರೂಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಏನಿದು ವಿದೇಶಿ ವಿನಿಮಯ ವಂಚನೆ ಕೇಸ್: ಶಿಯೋಮಿ ಕಂಪನಿಯ 5,551 ಕೋಟಿ ರೂ. ಜಪ್ತಿ: ಇ.ಡಿ

ಮುಂದಿನ ವಿಧಾನಸಭೆ ಚುನಾವಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಈ ಸಲ ನಾನು ಮೊಳಕಾಲ್ಮೂರು ಕ್ಷೇತ್ರದಲ್ಲೇ ಸ್ಪರ್ಧಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next