Advertisement

ಸಿದ್ದರಾಮಯ್ಯ ವಿರುದ್ಧ ಮತ್ತೆ ಸ್ಪರ್ಧೆ ಮಾಡುತ್ತೇನೆ: ಶ್ರೀರಾಮುಲು

11:51 AM Jul 19, 2022 | Team Udayavani |

ಬೀದರ್: ಬಿಜೆಪಿ ಪಕ್ಷ ಸೂಚಿಸಿದರೆ ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಸ್ಫರ್ಧೆ ಮಾಡುವುದಾಗಿ ಸಾರಿಗೆ ಸಚಿವ ಶ್ರೀರಾಮಲು ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾದಾಮಿಯಲ್ಲಿ ಸಿದ್ದರಾಮಯ್ಯ ಮತ್ತೆ ಸ್ಫರ್ಧಿಸಿದರೆ ಅವರು ಠೇವಣಿ ಕಳೆದುಕೊಳ್ಳಲಿದ್ದಾರೆ. ಅಲ್ಲಿನ‌ ಜನ‌ ಶ್ರೀರಾಮುಲು ಅವರನ್ನು ಸೋಲಿಸಿ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.

ಕ್ಷೇತ್ರ ಹುಡುಕಾಡುತ್ತಿರುವ ಸಿದ್ದರಾಮಯ್ಯ ಸಿಎಂ ಹೇಗಾಗುತ್ತಾರೆ? ಪಕ್ಷದ ಬೆಂಬಲದ ಮೇಲೆ ಸಿದ್ದರಾಮಯ್ಯ ಹಾರಾಡುತ್ತಿದ್ದಾರೆ, ಅವರಿಗೆ ವೈಯಕ್ತಿಕ ವರ್ಚಸ್ಸು ಇಲ್ಲ. ಸ್ವಂತ ಶಕ್ತಿ ಸಿದ್ದರಾಮಯ್ಯಗೆ ಇಲ್ಲ, ಅವರಿಗೆ ಸಿದ್ದಾಂತಗಳಿಲ್ಲ. ಹಿಂದುಳಿದ ಜಾತಿಯ ‌ಹೆಸರು ಹೇಳಿಕೊಂಡು ರಾಜಕೀಯ ‌ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ಜನ ಸಂಪರ್ಕ ಸಭೆ, ಸಾರ್ವಜನಿಕ ಭೇಟಿ ಕಡ್ಡಾಯಕ್ಕೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ

ಕಾಂಗ್ರೆಸ್ ಪಕ್ಷ ದೇಶ ರಾಜ್ಯದ ಜನರಿಂದ ತಿರಸ್ಕಾರಕ್ಕೊಳಗಾದ ಪಕ್ಷ. ಸಿದ್ದರಾಮಯ್ಯ ನಾನು‌ ಸಿಎಂ ಎನ್ನುತ್ತಿದ್ದರೆ, ಇತ್ತ ಡಿಕೆ ಶಿವಕುಮಾರ್ ಕೂಡಾ ನಾನು ಸಿಎಂ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಯಾವ ಪಕ್ಷಕ್ಕೆ ಹೋಗಿದ್ದಾರೆ ಆ ಪಕ್ಷ ಮುಳುಗಿಸಿ ಬಂದಿದ್ದಾರೆ. ಸಿದ್ದರಾಮಯ್ಯ ಭಸ್ಮಾಸುರ ಇದ್ದಹಾಗೆ ಎಂದು ರಾಮುಲು ವ್ಯಂಗ್ಯವಾಡಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next