Advertisement

ಶಿವಮೊಗ್ಗದಲ್ಲಿ ವಿದ್ಯುತ್ ತಗುಲಿ ಎರಡು ಕಾಡಾನೆ ಸಾವು: ಕರೆಂಟ್ ಕೊಟ್ಟಾತ ಅಧಿಕಾರಿಗಳ ವಶಕ್ಕೆ

04:53 PM Sep 25, 2022 | Team Udayavani |

ಶಿವಮೊಗ್ಗ: ಜಿಲ್ಲೆಯ ಆಯನೂರು ಸಮೀಪದ ಆನೆಸರದ ಬಳಿ ವಿದ್ಯುತ್ ತಗುಲಿ ಎರಡು ಕಾಡಾನೆಗಳು ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ.

Advertisement

ಶೆಟ್ಟಿಹಳ್ಳಿ ಆಭಯಾರಣ್ಯ ವ್ಯಾಪ್ತಿಯ ಚೆನ್ನಹಳ್ಳಿ ಸಮೀಪದ ಆನೆಸರದಲ್ಲಿ ಮೆಕ್ಕೆಜೋಳದ ಕಾವಲಿಗೆ ಅಳವಡಿಸಿದ್ದ ವಿದ್ಯುತ್ ಸ್ಪರ್ಶಿಸಿ ಸುಮಾರು 20 ವರ್ಷ ಪ್ರಾಯದ ಎರಡು ಗಂಡು ಕಾಡಾನೆಗಳು ಮೃತಪಟ್ಟಿವೆ.

ಕಾಡುಪ್ರಾಣಿ ಹಾವಳಿ ತಡೆಯಲು ಚಂದ್ರನಾಯಕ್ ಎಂಬುವರು ಜಮೀನಿನಲ್ಲಿ ಬೇಲಿಗೆ ವಿದ್ಯುತ್ ಕೊಟ್ಟಿದ್ದರು. ಆದರೆ ಕಾಡಾನೆಗಳು ಮೃತಪಟ್ಟ ಕಾರಣ ಜಮೀನು ಮಾಲೀಕ ಚಂದ್ರನಾಯಕ್ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ವಾಯುಪಡೆ ಟ್ರೈನಿ ಕೆಡೆಟ್‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಈ ಹಿಂದೆಯೇ ಭದ್ರಾ ವನ್ಯಜೀವಿ ವಲಯದಿಂದ ಏಳು ಕಾಡಾನೆಗಳು ವಲಸೆ ಬಂದಿದ್ದವು. ಶೆಟ್ಟಿಹಳ್ಳಿ ಕಾಡಿನಲ್ಲಿ ಬೀಡುಬಿಟ್ಟಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next