Advertisement
ಗುರುವಾರ ಮನೆಯಿಂದ ಒಂದು ಕಿ.ಮೀ. ದೂರದ ಪಾರಪಳ್ಳ ಅರಣ್ಯ ಪ್ರದೇಶದಲ್ಲಿ ಕುಮಾರನ್ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಂಡ ಸ್ಥಳೀಯರು ಆದೂರು ಪೊಲೀಸರಿಗೆ ಮಾಹಿತಿ ನೀಡಿದರು. ಕಾಡಾನೆ ತಿವಿದ ಗುರುತುಗಳು ಮೃತದೇಹದಲ್ಲಿ ಪತ್ತೆಯಾಗಿವೆ. ಮಾತ್ರವಲ್ಲ ಅವರನ್ನು ಎಳೆದೊಯ್ದ ಗುರುತುಗಳೂ ಆ ಪರಿಸರದಲ್ಲಿ ಕಂಡು ಬಂದಿವೆ. ಕೆಲಸ ಬಿಟ್ಟು ವಾಪಸಾಗುತ್ತಿದ್ದಾಗ ಕುಮಾರನ್ ಮೇಲೆ ಆನೆ ದಾಳಿ ನಡೆಸಿರಬಹುದೆಂದು ಶಂಕಿಸಲಾಗಿದೆ.
ಕುಮಾರನ್ ಬಾಲಕನಾಗಿದ್ದಾಗಲೇ ತಂದೆ ನಿಧನ ಹೊಂದಿದ್ದರು. ಸಹೋದರಿಯರಿಗೆ ವಿವಾಹವಾಗಿದೆ. ಬಳಿಕ ತಾಯಿಯನ್ನು ಸಲಹುವ ಹೊಣೆ ಅವಿವಾಹಿತನಾದ ಕುಮಾರನ್ ಮೇಲೆ ಬಿತ್ತು. ಈಗ ಮಗನ ಅಕಾಲಿಕ ಸಾವಿನಿಂದಾಗಿ ತಾಯಿ ಚರುಂಬಿ ಏಕಾಂಗಿಯಾಗಿದ್ದಾರೆ.