Advertisement

ತೀರ್ಥಹಳ್ಳಿ: ಕುರುವಳ್ಳಿ ಬಳಿ ಆನೆ ಹಾವಳಿ

09:59 AM Dec 31, 2022 | Kavyashree |

ತೀರ್ಥಹಳ್ಳಿ: ಪಟ್ಟಣದ ವಾರ್ಡ್ 14ರ ಕುರುವಳ್ಳಿಯಲ್ಲಿ ಡಿ.31 ರಂದು ಬೆಳಗ್ಗಿನ ಸಮಯ ಸುಮಾರು 3.30 ಗಂಟೆಗೆ ಕಾಡಾನೆಯೊಂದು ಸ್ಥಳೀಯ ನಿವಾಸಿ ಒಬ್ಬರಿಗೆ ಕಾಣಿಸಿಕೊಂಡಿದ್ದು ಆನೆಯ ಹೆಜ್ಜೆ ಗುರುತು ಕೂಡ ಪತ್ತೆಯಾಗಿದೆ.

Advertisement

ಎರಡು ದಿನಗಳ ಹಿಂದೆ ಶೇಡ್ಗಾರ್, ಕಟ್ಟೆಹಕ್ಲು ಸಮೀಪ ಕಾಣಿಸಿಕೊಂಡಿತ್ತು ಎಂದು ಹೇಳಲಾಗುತ್ತಿದ್ದೂ ಅದೇ ಆನೆ ಈ ಕಡೆ ಬಂದಿರಬಹುದು ಎಂದು ಊಹಿಸಲಾಗುತ್ತಿದೆ.

ರಾಷ್ಟಿಯ ಹೆದ್ದಾರಿ 169 ರ ತೀರ್ಥಹಳ್ಳಿ-ಕೊಪ್ಪ- ಶೃಂಗೇರಿ ಮಾರ್ಗದಲ್ಲಿರುವ ಕುರುವಳ್ಳಿ ಮುಖ್ಯ ರಸ್ತೆಯಲ್ಲಿ ಓಡಾಡಿ ಅಂಗಡಿ ಒಂದರ ನೇಮ್ ಬೋರ್ಡ್ ಪುಡಿ ಪುಡಿ ಮಾಡಿ ಬುಕ್ಲಾಪುರ ಸಮೀಪ ತುಂಗಾ ನದಿ ದಡಕ್ಕೆ ತಲುಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಸ್ಥಳೀಯರು ಸೇರಿ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯ ಹುಡುಕಾಟ ನಡೆಸುತಿದ್ದಾರೆ.

ಕಾಡಿನಲ್ಲಿ ಇರಬೇಕಾದ ಕಾಡಿನ ರಾಜ ಊರಿಗೆ ಬಂದಿರುವುದು ಜನರಲ್ಲಿ, ಸ್ಥಳೀಯ ನಿವಾಸಿಗಳಲ್ಲಿ ಆತಂಕ ವ್ಯಕ್ತವಾಗುತ್ತಿದ್ದರೆ ಇತ್ತ ಹೊಸ ವರ್ಷ ಆಚರಣೆ ಮಾಡಲು ಬಂದಿರಬಹುದು ಎಂದು ಸ್ಥಳೀಯರು ತಮಾಷೆಯಾಗಿಯೂ ಮಾತನಾಡಿಕೊಳ್ಳುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next