Advertisement

Sullia ಕೃಷಿ ತೋಟಕ್ಕೆ ಕಾಡಾನೆ ಲಗ್ಗೆ

12:22 AM Jan 07, 2024 | Team Udayavani |

ಸುಳ್ಯ: ತಾಲೂಕಿನ ಜಾಲ್ಸೂರು ಗ್ರಾಮದ ಕೆಮನಬಳ್ಳಿ ಪರಿಸರದಲ್ಲಿ ಒಂಟಿ ಸಲಗವೊಂದು ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಸ್ಥಳೀಯರ ಕೃಷಿ ನಾಶಗೊಳಿಸಿದ ಘಟನೆ ಜ. 5ರಂದು ರಾತ್ರಿ ಸಂಭವಿಸಿದೆ.

Advertisement

ಕೆಮನಬಳ್ಳಿಯ ಜಯಾನಂದ ಅವರ ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟು, ಆರು ತೆಂಗಿನ ಸಸಿಗಳನ್ನು ಹಾನಿಗೊಳಿಸಿದ್ದು, ಚ ಜಯಾನಂದರ ತಂದೆಯ ಸ್ಮಾರಕವನ್ನು ತುಳಿದು ಹಾನಿಗೊಳಿಸಿದೆ.

ಸ್ಥಳೀಯ ಸದಾನಂದ ಮಣಿಯಾಣಿ ಅವರ ತೋಟದಲ್ಲಿ ಬೇಲಿ, ಜ್ಯೋತಿರಾಣಿ ಅವರ ಮನೆಯ ತಂತಿಬೇಲಿ ನಾಶಮಾಡಿದೆ.

ಪಂಜಿಕಲ್ಲು, ಮುರೂರು ಹಾಗೂ ಬೆಳ್ಳಿಪ್ಪಾಡಿ ಭಾಗದಲ್ಲಿ ಕೃಷಿಕರ ತೋಟಕ್ಕೆ ಹಾನಿ ಮಾಡುತ್ತಿದ್ದ ಒಂಟಿ ಸಲಗ ಅಲ್ಲಿಂದ ಕನಕಮಜಲು ದೇರ್ಕಜೆ, ಕುಧ್ಕುಳಿ, ಕಾಪಿಲ, ಮುಗೇರು , ಪೆರ್ನಾಜೆ, ಪೆರ್ಲಂಪಾಡಿ, ಕೊಳ್ತಿಗೆ ಮೂಲಕ ಇದೀಗ ಕೆಮನಬಳ್ಳಿಗೆ ತಲುಪಿದ್ದು, ಅಲ್ಲಿ ಕೃಷಿಕರ ನಿದ್ದೆಗೆಡಿಸುತ್ತಿದೆ. ಕೆಮನಬಳ್ಳಿ ಫಾಲ್ಸ್‌ ಸಮೀಪದ ಕಾಡಿನಲ್ಲಿ ಹಗಲು ಹೊತ್ತಿನಲ್ಲಿ ಈ ಒಂಟಿ ಆನೆ ಬಿಡಾರ ಹೂಡಿದ್ದು, ರಾತ್ರಿ ವೇಳೆ ಕೃಷಿಕರ ತೋಟಕ್ಕೆ ದಾಳಿ ನಡೆಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next