Advertisement

Belthangady ಕಾನರ್ಪದಲ್ಲಿ ಕಾಡಾನೆ ದಾಳಿ: ಭತ್ತದ ಗದ್ದೆ ನಾಶ

12:20 AM Oct 02, 2023 | Team Udayavani |

ಬೆಳ್ತಂಗಡಿ: ಅರಣ್ಯ ಇಲಾಖೆಯಿಂದ ಆನೆ ದಾಳಿಗೆ ಸಂಬಂಧಿಸಿ ಆನೆ ಕಾಡಿಗಟ್ಟುವ ಅನೇಕ ಪ್ರಯತ್ನಗಳ ಮಧ್ಯೆಯೇ ಶನಿವಾರ ರಾತ್ರಿ ತಾಲೂಕಿನ ಕಡಿರುದ್ಯಾವರ ಕಾನರ್ಪ ಸಮೀಪ ಕಾಡಾನೆಗಳು ಭತ್ತ ಗದ್ದೆ ಗೆ ದಾಳಿಯಿಟ್ಟು ತೆನೆಭರಿತ ಭತ್ತವನ್ನು ಪುಡಿಗಟ್ಟಿವೆ.

Advertisement

ಕಾನರ್ಪ ಎರುಬಳ್ಳಿ ಬೊಮ್ಮಣ್ಣ ಗೌಡ ಅವರ ಒಂದು ಎಕ್ರೆ ಭತ್ತದ ಗದ್ದೆ ಹಾಗೂ ಬೆದ್ರಡಿ ನಾರಾಯಣ ಗೌಡ ಅವರ ಅರ್ಧ ಎಕ್ರೆಗೂ ಅಧಿಕ ಭತ್ತದ ಕೃಷಿಗೆ ಅನೆಗಳು ನುಗ್ಗಿ ಭತ್ತದ ಪೈರನ್ನು ತುಳಿದು ಧ್ವಂಸ ಮಾಡಿವೆ.

ಒಂದು ವಾರದಿಂದ ಈ ಭಾಗದ ಫ‌ಣಿಕಲ್ , ಹಿತ್ತಿಲಕೊಡಿ ಪರಿಸರದಲ್ಲಿ ಅನೆಗಳು ನಿರಂತರವಾಗಿ ಕೃಷಿಗೆ ಹಾನಿ ಮಾಡುತ್ತಿವೆ. ಅರಣ್ಯ ಇಲಾಖೆ ಅಸ್ಸಾಂನ ತಜ್ಞರನ್ನು ಕರೆಸಿ ಮೆಣಸಿನ ಹೊಗೆ ಪ್ರಯೋಗ ನಡೆಸಿದರೂ ಆನೆಗಳ ಹಿಂಡು ಊರಿಂದ ಊರಿಗೆ ಸಂಚರಿಸಿ ದಾಳಿ ಪ್ರಮಾಣ ಹೆಚ್ಚಿಸುತ್ತಿವೆ. ಇದರಿಂದ ಕೃಷಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕಟಾವಿಗೆ ಸಿದ್ಧವಾಗಿರುವ ಪೈರುಗಳು ಬೆಳೆದು ಕೈಗೆ ಸಿಗದಂತಾಗಿದೆ. ಸರಕಾರ ಅಥವಾ ಸಂಬಂಧ ಪಟ್ಟ ಸಚಿವರು ಗಮನ ಹರಿಸದಿರುವುದರಿಂದ ಕೃಷಿಕರು ಆಕ್ರೋಶಗೊಂಡಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next