Advertisement

ನಾನು ಪಾಕ್ ಪರವಾಗಿದ್ದರೆ ನನಗೆ ಪದ್ಮ ವಿಭೂಷಣ ಕೊಟ್ಟಿದ್ಯಾಕೆ: ಶರದ್ ಪವಾರ್

10:09 AM Oct 11, 2019 | Team Udayavani |

ಮುಂಬೈ: ಪ್ರದಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಎನ್ ಸಿಪಿ ನಾಯಕ ಶರದ್ ಪವಾರ್ ಮತ್ತೆ ಕಿಡಿಕಾರಿದ್ದು, ಒಂದು ವೇಳೆ ನಾನು ಪಾಕಿಸ್ಥಾನದ ಪರವಾಗಿದ್ದರೆ ಕೇಂದ್ರ ಸರಕಾರ ನನಗೆ ಪದ್ಮ ವಿಭೂಷಣ ಕೊಟ್ಟಿದ್ಯಾಕೆ ಎಂದು ಕಿಡಿಕಾರಿದ್ದಾರೆ.

Advertisement

ಶರದ್ ಪವರ್ ಇತ್ತೀಚೆಗೆ ಪಾಕಿಸ್ಥಾನದಲ್ಲಿ ತನಗೆ ಉತ್ತಮ ಆತಿಥ್ಯ ಸಿಕ್ಕಿದೆ. ಕೆಂದ್ರ ಸರಕಾರ ಹೇಳುವ ಹಾಗೆ ಕೆಟ್ಟ ಪರಿಸ್ಥಿತಿ ಪಾಕಿಸ್ಥಾನದಲ್ಲಿಲ್ಲ ಎಂದು ಹೇಳಿಕೆ ನೀಡಿದ್ದರು. ಕೆಲ ದಿನಗಳ ಹಿಂದೆ ಮಹಾರಾಷ್ಟ್ರಕ್ಕೆ ಭೇಟಿ ನಿಡಿದ್ದ ಪ್ರಧಾನಿ ನರೇಂದ್ರ ಮೋದಿ ಇದೇ ವಿಷಯದಲ್ಲಿ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಮಾಧ್ಯಮವೊಂದಕ್ಕೆ ಮಾತನಾಡಿದ ಹಿರಿಯ ರಾಜಕಾರಣಿ ಶರದ್ ಪವಾರ್, ಪ್ರಧಾನ ಮಂತ್ರಿಯವರಿಗೆ ಖಚಿತ ಮಾಹಿತಿ ಕೊಡುವವರು ಇದ್ದಾರೆ. ಆದರೆ ನಾನು ಏನು ಹೇಳಿದ್ದೆ ಎಂದು ಅವರಿಗೆ ಖಚಿತವಾಗಿ ಯಾರೂ ಹೇಳಿಲ್ಲವೇ? ನನ್ನ ಹಿತಾಸಕ್ತಿಗಳು ಪಾಕ್ ಪರವಾಗಿ ಇದ್ದರೆ, ನಾನು ಭಾರತದ ವಿರುದ್ಧವಾಗಿದ್ದರೆ ಕೇಂದ್ರ ಸರಕಾರ ನನಗೆ ಏಕೆ ಪದ್ಮ ವಿಭೂಷಣ ಗೌರವ ನೀಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next