Advertisement

ಗೃಹ ಖಾತೆಯಿಂದ ಪರಂ ಬಿಡುವ ಅಗತ್ಯ ಇರಲಿಲ್ಲ

12:30 AM Dec 29, 2018 | Team Udayavani |

ಬೆಂಗಳೂರು: ಪರಿಶಿಷ್ಟ ಸಮುದಾಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರನ್ನು ಗೃಹ ಸಚಿವ ಸ್ಥಾನದಿಂದ ಕೈಬಿಡುವ ಅಗತ್ಯವೇನಿತ್ತು? ಪರಿಶಿಷ್ಟ ಸಮುದಾಯದವರು ಉಪಮುಖ್ಯಮಂತ್ರಿ ಜತೆಗೆ ಗೃಹ ಸಚಿವರಾಗುವುದನ್ನು ಅವರ ಪಕ್ಷವೇ ಸಹಿಸುವುದಿಲ್ಲ ಎಂದರೆ ಏನು ಹೇಳುವುದು ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳುವ ಮೂಲಕ ಮೈತ್ರಿ ಪಕ್ಷದ ವಿರುದ್ಧವೇ ಪರೋಕ್ಷ ವಾಗ್ಧಾಳಿ ನಡೆಸಿದರು.

Advertisement

ವಿಧಾನಸೌಧದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಮೇಶ್ವರ್‌ ಅವರಿಗೆ ಉಪಮುಖ್ಯಮಂತ್ರಿಯಾಗಿ ಗೃಹ ಖಾತೆಯೂ ಇರಬೇಕಿತ್ತು. ಪರಮೇಶ್ವರ್‌ ಅವರು ಎಂಟು ವರ್ಷ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕಳೆದ ಆರು ತಿಂಗಳಲ್ಲಿ ತಮ್ಮ ಕೈಲಾದ ಮಟ್ಟಿಗೆ ಗೃಹ ಖಾತೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಗೃಹ ಸಚಿವರಾಗಿದ್ದಾಗ ಕಾನ್‌ಸ್ಟೆಬಲ್‌ ವರ್ಗಾವಣೆಯನ್ನೂ ಅವರ ಬಳಿ ಕೇಳಿಲ್ಲ. ಹೀಗಿರುವಾಗ ನನ್ನ ಹೆಸರು ಯಾಕೆ ತರಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಎಷ್ಟು ದಿನ ಸಹಿಸುತ್ತಾರೋ?
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಕಾಂಗ್ರೆಸ್‌ ಶಾಸಕರನ್ನು ನಿಯೋಜನೆ ಮಾಡಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಸಹಿಸುತ್ತಾರೆ. ನಾವೇನು ಹೆದರಿ ಕೂರುವುದಿಲ್ಲ. ಮೈತ್ರಿ ಪಕ್ಷದಲ್ಲಿ ಸ್ಥಾನಗಳ ಹಂಚಿಕೆ ಬಗ್ಗೆ ಜೆಡಿಎಸ್‌, ಕಾಂಗ್ರೆಸ್‌ ಮುಖಂಡರು ಚರ್ಚಿಸಿ ನಿರ್ಧರಿಸಿದ್ದಾರೆ. ನಾನೇಕೆ ಮಧ್ಯಪ್ರವೇಶಿಸಲಿ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next