Advertisement

ಮುಂಬಯಿಯನ್ನು ಅವರದೇ ಅಂಗಳದಲ್ಲಿ ಮಣಿಸಿದ ಖುಷಿ: ನಾಯರ್‌

11:18 PM Jan 05, 2020 | Sriram |

ಮುಂಬಯಿ: ಮುಂಬಯಿಯನ್ನು ಅವರದೇ ಅಂಗಳದಲ್ಲಿ ಮಣಿಸಿದ್ದೊಂದು ಅಮೋಘ ಸಾಧನೆ, ಇದಕ್ಕಿಂತ ಮಿಗಿಲಾದ ಖುಷಿ ಬೇರೊಂದಿಲ್ಲ ಎಂಬುದಾಗಿ ಕರ್ನಾಟಕ ರಣಜಿ ತಂಡದ ನಾಯಕ ಕರುಣ್‌ ನಾಯರ್‌ ಪ್ರತಿಕ್ರಿಯಿಸಿದ್ದಾರೆ.

Advertisement

“ಈ ಜಯದಿಂದ ನಮ್ಮ ಆಟಗಾರರೆಲ್ಲರ ಆತ್ಮವಿಶ್ವಾಸ ಖಂಡಿತ ಹೆಚ್ಚಲಿದೆ. ಇದರ ಸ್ಫೂರ್ತಿಯಲ್ಲೇ ಉಳಿದ ಪಂದ್ಯಗಳನ್ನು ಆಡಿ ಮೇಲುಗೈ ಸಾಧಿಸಬೇಕಿದೆ’ ಎಂದು ನಾಯರ್‌ ಹೇಳಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮುಂಬಯಿ ನಾಯಕ ಸೂರ್ಯಕುಮಾರ್‌ ಯಾದವ್‌, “ರೈಲ್ವೇಸ್‌ ವಿರುದ್ಧ ನಾವು ಬ್ಯಾಟಿಂಗ್‌ನಲ್ಲಿ ಎಡವಿದೆವು. ಕರ್ನಾಟಕ ವಿರುದ್ಧ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ತಂಡವಾಗಿ ಆಡಲು ವಿಫ‌ಲರಾದೆವು’ ಎಂದರು.

ಸತತ 2 ಸೋಲುಂಡ ಮುಂಬಯಿ ಸ್ಥಿತಿ ಮುಂದಿನ ಪಂದ್ಯಗಳ ವೇಳೆ ಇನ್ನಷ್ಟು ಬಿಗಡಾಯಿಸಬಹುದು. ತಂಡ ಶಾ, ರಹಾನೆ ಮತ್ತು ಯಾದವ್‌ ಸೇವೆಯನ್ನು ಕಳೆದುಕೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next