Advertisement

ಆಪ್ತರ ಪಟ್ಟಿಯಲ್ಲಿ ಡಿಕೆಶಿ ಇದ್ದಾರೆ ಎಂದು ಕೊನೆಗೂ ಹೇಳದ ಸಿದ್ದರಾಮಯ್ಯ!

12:43 PM Jul 05, 2022 | Team Udayavani |

ಬೆಂಗಳೂರು: ತಮ್ಮ ಆಪ್ತರ ಪಟ್ಟಿಯಲ್ಲಿ‌‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಇದ್ದಾರಾ ? ಎಂಬ ಮಾಧ್ಯಮದ ಪ್ರಶ್ನೆಗೆ ಕೊನೆಗೂ ಉತ್ತರ ನೀಡದೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅಚ್ಚರಿ ಮೂಡಿಸಿದರು.

Advertisement

ರಾಜ್ಯ ಸರಕಾರದ ವಿರುದ್ಧ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯನವರಿಗೆ ಈ ” ಆಪ್ತ” ಪ್ರಶ್ನೆ ಎದುರಾಯಿತು. ನಿಮ್ಮ ಆಪ್ತ ಶಾಸಕ‌ ಜಮೀರ್ ಅಹ್ಮದ್ ವಿರುದ್ಧ ಎಸಿಬಿ ದಾಳಿ ನಡೆಸಿ ಪಿಎಸ್ ಐ ಹಗರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆಯಾ? ಎಂಬ ಪ್ರಶ್ನೆಗೆ ಎಲ್ಲರೂ ನನ್ನ ಆಪ್ತರು. ಎಂದು ವೇದಿಕೆಯಲ್ಲಿ ಇದ್ದ ಎಲ್ಲರ ಹೆಸರನ್ನು ಹೇಳಿದರು. ಆದರೆ ಡಿ.ಕೆ.ಶಿವಕುಮಾರ್ ಹೆಸರನ್ನು ಮಾತ್ರ ಹೇಳಲಿಲ್ಲ.

ಇದನ್ನೂ ಓದಿ:ನಮ್ಮದು ಜಿರೋ ಟಾಲಾರೆನ್ಸ್. ಯಾವುದನ್ನು ಸಹಿಸಿಕೊಳ್ಳುವುದಿಲ್ಲ: ಸಿಎಂ ಬೊಮ್ಮಾಯಿ

ಇದಕ್ಕೆ ಸುದ್ದಿಗಾರರು ಶಿವಕುಮಾರ್ ನಿಮ್ಮ ಆಪ್ತರಲ್ಲವೇ? ಎಂದು ಎಷ್ಟು ಬಾರಿ ಹೇಳಿದರೂ ಉತ್ತರಿಸಲಿಲ್ಲ. ನೀವು ನನ್ನ ಆಪ್ತರು ಎಂದು ಪತ್ರಕರ್ತರಿಗೆ ಹೇಳಿದರೇ ವಿನಾ ಶಿವಕುಮಾರ್ ತಮ್ಮ ಆಪ್ತ ಎನ್ನಲಿಲ್ಲ. ಈ ಘಟನೆ ನಡೆಯುವಾಗ ಡಿ.ಕೆ.ಶಿವಕುಮಾರ್ ನಗುತ್ತಾ ಕುಳಿತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next