Advertisement
ಒಂದು ಹಂತದಲ್ಲಿ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದ ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ಗೂ ಆ ಬಗ್ಗೆ ತಿಳಿಸಿದ್ದರಾದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಠದಿಂದ ಮೈಸೂರು ಕಾಂಗ್ರೆಸ್ಗೆ ಬಿಟ್ಟು ಕೊಡುವಂತಾಯಿತು. ಹೀಗಾಗಿ, ಉಳಿದಿರು ವುದು ಬೆಂಗಳೂರು ಉತ್ತರ ಹಾಗೂ ತುಮಕೂರು ಕ್ಷೇತ್ರ ಮಾತ್ರ. ಎರಡರಲ್ಲಿ ಯಾವುದು ಸೂಕ್ತ ಎಂಬ ಗೊಂದಲ ದೇವೇಗೌಡರನ್ನು ಕಾಡುತ್ತಿರುವಂತಿದೆ. ಇತ್ತ ಬೆಂಗಳೂರು ಉತ್ತರದಲ್ಲಿಯೂ ಐವರು ಕಾಂಗ್ರೆಸ್ ಶಾಸಕರಿದ್ದಾರೆ. ಒಕ್ಕಲಿಗ ಸಮುದಾಯದ ಮತದಾರರು ಹೆಚ್ಚಾಗಿದ್ದರೂ ಬೆಂಗ ಳೂರು ನಗರ ವ್ಯಾಪ್ತಿಯಲ್ಲಿ ಜೆಡಿಎಸ್ಗೆ ಎಂದೂ ಉತ್ತಮ ಸ್ಪಂದನೆ ಸಿಕ್ಕಿಲ್ಲ. ಹಾಲಿ ಕಾಂಗ್ರೆಸ್ ಶಾಸಕರು ಮನಃಪೂರ್ವಕವಾಗಿ ಕೆಲಸ ಮಾಡುತ್ತಾರಾ ಎಂಬ ಅನುಮಾನವೂ ಇದೆ.
Related Articles
Advertisement
ಗೌಡರ ಮೌನ
ಮೂರು ದಿನಗಳಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೌನ ವಾಗಿದ್ದಾರೆ. ಕಾರ್ಯಕರ್ತರು ಹಾಗೂ ಮುಖಂಡರ ಜತೆ ಆಂತರಿಕ ಚರ್ಚೆಯಲ್ಲಿ ತೊಡಗಿರುವ ಅವರು ಸ್ಪರ್ಧೆ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ. ಸೀಟುಹಂಚಿಕೆ ವಿಚಾರದಲ್ಲಿ ಮೈಸೂರು ಕ್ಷೇತ್ರ ಸಿಗದಿರುವ ಬಗ್ಗೆ ಅವರಿಗೆ ತೀವ್ರ ಅಸಮಾಧಾನ ವಿದೆ. ಹೀಗಾಗಿಯೇ ದೆಹಲಿ ಮಟ್ಟದಲ್ಲಿ ದೇವೇಗೌಡರು-ರಾಹುಲ್ಗಾಂಧಿ ಜತೆಗೂಡಿ ಸೀಟು ಹಂಚಿಕೆ ಬಗ್ಗೆ ಘೋಷಿಸಲು ಉದ್ದೇಶಿಸ ಲಾಗಿತ್ತು. ಆದರೆ, ಸೀಟು ಹಂಚಿಕೆಯಲ್ಲಿ ತಮಗೆ ಬೇಕಾದ ಕ್ಷೇತ್ರಗಳು ಸಿಗಲಿಲ್ಲ ಎಂಬ ಕಾರಣಕ್ಕೆ ಡ್ಯಾನಿಶ್ ಅಲಿ ಅವರನ್ನು ರಾಹುಲ್ಗಾಂಧಿಯವರ ಬಳಿ ಕಳುಹಿಸಿದರು. ಹಾಲಿ ಕಾಂಗ್ರೆಸ್ ಸಂಸದರು ಇರುವ ಕ್ಷೇತ್ರಕ್ಕೆ ಬೇಡಿಕೆ ಇಡದಿದ್ದರೂ ತುಮಕೂರು ಸೇರಿ ಎಂಟು ಸೀಟು ಬಿಟ್ಟುಕೊಟ್ಟು ಇದೀಗ ತಮ್ಮನ್ನು ವಿಲನ್ನಂತೆ ಕಾಂಗ್ರೆಸ್ನ ಕೆಲ ನಾಯಕರು ಚಿತ್ರಿಸುತ್ತಿದ್ದಾರೆಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನನಗೆ ಕ್ಷೇತ್ರ ಯಾಕೆ ಮತ್ತು ಹೇಗೆ ತಪ್ಪಿತು ಎನ್ನುವುದು ಗೊತ್ತಿಲ್ಲ. ಕ್ಷೇತ್ರ ನನಗೇಸಿಗುತ್ತದೆ ಎನ್ನುವ ವಿಶ್ವಾಸ ಇದೆ. ಸಂಸತ್ತಿನ ಕೊನೆ ಕಲಾಪದವರೆಗೂ ನಾನುಕೆಲಸ ಮಾಡಿದ್ದೇನೆ. ದೇವೇ ಗೌಡರು ಸ್ಪರ್ಧೆ ಮಾಡದಿದ್ದರೆ, ಕ್ಷೇತ್ರ ಬಿಟ್ಟುಕೊಡುವಂತೆಕೇಳಿದ್ದೇವೆ. ಹೆಚ್ಚಿಗೆ ಈಗಲೇ ನಾನೇನು ಮಾಡಲು ಆಗುವುದಿಲ್ಲ.● ಮುದ್ದಹನುಮೇಗೌಡ, ತುಮಕೂರು ಸಂಸದ