Advertisement

ದೇಗುಲಗಳ ಟ್ರಸ್ಟ್‌ಗಳಲ್ಲಿ ರಾಜಕಾರಣಿಗಳಿಗೆ ಏನು ಕೆಲಸ?

11:41 PM Sep 26, 2022 | Team Udayavani |

ಹೊಸದಿಲ್ಲಿ: ದೇವಾಲಯಗಳ ಟ್ರಸ್ಟ್‌ಗಳ ಆಡಳಿತ ಮಂಡಳಿಗಳಲ್ಲಿ ರಾಜಕಾರಣಿಗಳ ನೇಮಕದ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Advertisement

“ಹಲವು ಆರೋಪಗಳನ್ನು ಎದುರಿಸುತ್ತಿರುವವರನ್ನು, ನಡವಳಿಕೆಯೇ ಪ್ರಶ್ನಾರ್ಹವಾಗಿರುವವರನ್ನು ಮತ್ತು ವಿಶ್ವಾಸಾರ್ಹತೆಯೇ ಇಲ್ಲದವರನ್ನು ಹೇಗೆ ದೇಗುಲಗಳ ಟ್ರಸ್ಟ್‌ನಲ್ಲಿ ಸೇರಿಸುತ್ತೀರಿ’ ಎಂದು ಪ್ರಶ್ನಿಸಿದೆ.

ಶ್ರೀ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳ ಮಂಡಳಿ ನೇಮಕದ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾ|ಅಜಯ್‌ ರಸ್ತೋಗಿ ಮತ್ತು ನ್ಯಾ|ಸಿ.ಟಿ. ರವಿಕುಮಾರ್‌ ಅವರನ್ನೊಳಗೊಂಡ ನ್ಯಾಯಪೀಠ, “ಕೆಲವು ದೇವಾಲಯಗಳ ವಿಚಾರಕ್ಕೆ ಬಂದಾಗ ಅದು ಹೇಗೆ ರಾಜಕಾರಣಿಗಳು ಅಷ್ಟೊಂದು ಸಕ್ರಿಯರಾಗುತ್ತಾರೆ? ರಾಜಕಾರಣಿಗಳು ತಮ್ಮವರನ್ನೇ ಟ್ರಸ್ಟ್‌ಗಳಿಗೆ ಏಕೆ ನೇಮಿಸುತ್ತಾರೆ?’ ಎಂದು ಪ್ರಶ್ನಿಸಿದೆ.

ದೇವಾಲಯಗಳ ಮೇಲೆ ಜನರಿಗೆ ಅಗಾಧ ನಂಬಿಕೆಯಿರುತ್ತದೆ. ಹೀಗಿರುವಾಗ, ಉತ್ತಮ ವ್ಯಕ್ತಿತ್ವ, ಸಮಗ್ರತೆ, ಪರಿಣತಿಯಿರುವಂಥ ವ್ಯಕ್ತಿಗಳನ್ನು ಟ್ರಸ್ಟ್‌ಗಳಿಗೆ ನೇಮಕ ಮಾಡಬೇಕು. ಆ ಮೂಲಕ ಅಲ್ಲಿ ದೌರ್ಜನ್ಯಗಳು ನಡೆಯದೇ, ಭಕ್ತರಿಗೆ ಅನುಕೂಲ, ಉತ್ತಮ ಸೇವೆಗಳು ಲಭ್ಯವಾಗುವಂತೆ ಮಾಡಬೇಕು ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next