Advertisement

ಎನ್ ಐಎಗೆ ಕೊಟ್ಟ ಪರೇಶ್ ಮೇಸ್ತ,ರುದ್ರೇಶ್ ಪ್ರಕರಣಗಳು ಏನಾಯಿತು? :ರಾಮಲಿಂಗಾ ರೆಡ್ಡಿ

03:56 PM Jul 29, 2022 | Team Udayavani |

ಬೆಂಗಳೂರು: ಪರೇಶ್ ಮೇಸ್ತ, ರುದ್ರೇಶ್ ಹತ್ಯೆ ಪ್ರಕರಣಗಳನ್ನು ಎನ್ ಐಎ ಗೆ ಕೊಟ್ಟಿದ್ದರು, ಏನಾಯಿತು? ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಸರಕಾರವನ್ನು ಪ್ರಶ್ನಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಲಾಗದವರು ಎಸ್ ಡಿ ಪಿಐ,ಪಿಎಫ್ಐ ನಿಂದ ಕೊಲೆ ಎಂಬ ಆರೋಪ, ಅಪಪ್ರಚಾರ ಮಾಡುತ್ತಾರೆ. 2013 ರಿಂದ 18 ರವರೆಗೆ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. 23 ಜನ ಹಿಂದೂ ಯುವಕರ ಕೊಲೆ ಏನು ಹೇಳುತ್ತಿದ್ದರು. ಯಾವುದಾದರೂ ಹೆಣ ಬಿದ್ದರೆ ಸಾಕು.ಅಲ್ಲಿಗೆ ಚಕ್ಕಂತ ಇವರು‌ ಹೋಗುತ್ತಿದ್ದರು. ಪರೇಶ್ ಮೇಸ್ತ,ರುದ್ರೇಶ್,ಪ್ರವೀಣ್ ಹತ್ಯೆ ಆದವು,ಆಗ ರಣಹದ್ದುಗಳಂತೆ ಅಲ್ಲಿಗೆ ಹೋದರು ಎಂದು ಕಿಡಿ ಕಾರಿದರು.

ನಾನು‌ ಗೃಹ ಸಚಿವನಾಗಿದ್ದೆ, ನಾಲ್ಕುಜನ ರಾಜಕೀಯ ಕಾರಣಕ್ಕೆ ಕೊಲೆ ಆಗಿದ್ದರು.ಅಪಘಾತ,ವೈಯುಕ್ತಿಕ ಕಾರಣಕ್ಕೆ ಕೊಲೆಯಾಗಿದ್ದರು. ಇದರಲ್ಲಿ ಹಲವರು ಬೇರೆ ಬೇರೆಯವರೂ ಕೊಲೆಯಾಗಿದ್ದರು.ಅಷ್ಟೇ ಸಂಖ್ಯೆಯಲ್ಲಿ ಪಿಎಫ್ ಐ,ಎಸ್ ಡಿ ಪಿಐನವರ ಕೊಲೆ ಆಗಿತ್ತು. ಆ ಕೊಲೆಗಳನ್ನ ಮಾಡಿಸಿದವರು ಯಾರು? ನಾನು ಸಂಪೂರ್ಣ ವಿವರ ಪಡೆದಿದ್ದೆ, ನಗ್ನ ಸತ್ಯ ಅನ್ನುವ ಪುಸ್ತಕವನ್ನೂ ಬಿಡುಗಡೆ ಮಾಡಿದ್ದೆ. ಕೊಲೆ ಮಾಡುವವರು ನೇರವಾಗಿ ಬಂದು ಸರೆಂಡರ್ ಆಗುತ್ತಿದ್ದರು. ನಂತರ ಅವರ ಪರ ವಕೀಲರು ಬಂದು ಬಿಡಿಸಿಕೊಳ್ಳುತ್ತಿದ್ದರು. ವ್ಯವಸ್ಥಿತವಾಗಿಯೇ ಮಾಡುತ್ತಿದ್ದರು. ಕೊಲೆ ಮಾಡಿದವರ ಹೆಸರು ಮಾತ್ರ ಎಫ್ ಐಆರ್ ನಲ್ಲಿತ್ತು, ಅದರಲ್ಲಿ ಸಹಕರಿಸಿದವರ ಹೆಸರು ಇರುತ್ತಿರಲಿಲ್ಲ ಎಂದರು.

ನಾಲ್ಕು ವರ್ಷದಿಂದ ಕೊಲೆಗಳೇ ಆಗಿರಲಿಲ್ಲ, ಈಗ ಮತ್ತೆ ಕೊಲೆಗಳು ಶುರುವಾಗಿವೆ ಎಂಬ ಬಿಜೆಪಿ ಆರೋಪಕ್ಕೆ ರಾಮಲಿಂಗಾರೆಡ್ಡಿ ತಿರುಗೇಟು ನೀಡಿ, ಇವರ ಸರ್ಕಾರ ಬಂದ ಮೇಲೆ ಹಲವು ಕೇಸ್ ವಾಪಸ್ ಪಡೆದಿದ್ದು, ಕೊಲೆ ಯತ್ನ ಕೇಸ್ ವಾಪಸ್ ಪಡೆದಿದ್ದಾರೆ. ಪೊಲೀಸರ ಮೇಲಿನ ಹಲ್ಲೆ ಕೇಸ್ ವಾಪಸ್ ಪಡೆದಿದ್ದಾರೆ. ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ವಾಪಸ್ ಪಡೆದ ಕೇಸ್ ಯಾಕೆ ಹೇಳುತ್ತಿಲ್ಲ. ನಾವು ರೈತರ ಮೇಲಿನ ಕೇಸ್ ವಾಪಸ್ ಪಡೆದಿದ್ದೆವಷ್ಟೇ ಎಂದರು.

ಇದನ್ನೂ ಓದಿ : ಪ್ರವೀಣ್ ಹತ್ಯೆ ಪ್ರಕರಣ ಎನ್ಐಎಗೆ ವಹಿಸಿದ ಸಿಎಂ ಬೊಮ್ಮಾಯಿ

Advertisement

ಬಿಬಿಎಂಪಿಗೆ ಸಂಬಂಧಿಸಿದಂತೆ ಸಭೆ ಮಾಡುತ್ತಿದ್ದೇವೆ, ಮುಖಂಡರು,ಮಾಜಿ‌ಪಾಲಿಕೆ ಸದಸ್ಯರ ಜತೆ ಸಭೆ ನಡೆಸುತ್ತಿದ್ದು, ಮೀಸಲಾತಿ ಪ್ರಕಟ ಆಗಬೇಕು,ಚುನಾವಣೆ ಆಯೋಗ ದಿನಾಂಕ ಪ್ರಕಟಿಸಬೇಕು. ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ವಾರ್ಡ್ ವಿಂಗಡಣೆ ಅವರ ಕಚೇರಿಯಲ್ಲಿ ಮಾಡಿದರು. ಈಗ ಮೀಸಲಾತಿ ಕೂಡ ಹಾಗೆಯೇ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next