Advertisement

ಬಿಗ್ ಬಾಸ್ ವಿಜೇತ, ನಟ ಸಿದ್ದಾರ್ಥ್ ಶುಕ್ಲಾ ಸಾವಿಗೂ ಮುನ್ನ ರಾತ್ರಿ ನಡೆದಿದ್ದೇನು?

04:48 PM Sep 02, 2021 | Team Udayavani |

ಮುಂಬಯಿ:ಕಿರುತೆರೆ ಖ್ಯಾತ ನಟ, ಬಾಲಿಕಾ ವಧು ಧಾರವಾಹಿಯ ಮೂಲಕ ಜನಪ್ರಿಯತೆ ಗಳಿಸಿದ್ದ ಸಿದ್ದಾರ್ಥ್ ಶುಕ್ಲಾ ಗುರುವಾರ ಮುಂಬಯಿ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕರೆ ತರುವ ಮುನ್ನವೇ ಶುಕ್ಲಾ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.

Advertisement

ಶುಕ್ಲಾ ಸಾವಿಗೂ ಮುನ್ನ ಮನೆಯಲ್ಲಿ ಏನಾಗಿತ್ತು?

ಕೆಲವು ವರದಿಗಳ ಪ್ರಕಾರ ಸಿದ್ದಾರ್ಥ್ ಶುಕ್ಲಾ ಮಲಗುವ ಮುನ್ನ ಕೆಲವೊಂದು ಔಷಧಗಳನ್ನು ಸೇವಿಸಿದ್ದರು. ಬಳಿಕ ಬೆಳಿಗ್ಗೆ ಅವರು ಎದ್ದೇಳಲೇ ಇಲ್ಲ ಎಂದು ತಿಳಿಸಿದೆ.

ಪೊಲೀಸ್ ಮೂಲಗಳ ಪ್ರಕಾರ ಬೆಳಗ್ಗಿನ ಜಾವ 3.3.30ರ ಹೊತ್ತಿಗೆ ಸಿದ್ದಾರ್ಥ್ ಶುಕ್ಲಾ ಎದ್ದು ಕುಳಿತಾಗ ತುಂಬಾ ಸುಸ್ತಾದ ಅನುಭವವಾಗಿದ್ದು, ತನಗೆ ಎದೆ ನೋವು ಇರುವುದಾಗಿ ಶುಕ್ಲಾ ತಾಯಿಗೆ ತಿಳಿಸಿದ್ದರು. ತಾಯಿ ಸ್ವಲ್ಪ ನೀರು ಕುಡಿಯಲು ಕೊಟ್ಟು, ನಂತರ ಮಲಗಲು ಹೇಳಿದ್ದರು. ಬೆಳಗ್ಗೆ ತಾಯಿ ಮಗನನ್ನು ಎಬ್ಬಿಸಲು ಎಷ್ಟೇ ಪ್ರಯತ್ನಿಸಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲವಾಗಿತ್ತು. ಕೂಡಲೇ ತಾಯಿ ತಮ್ಮ ಸಹೋದರಿಗೆ ವಿಷಯ ತಿಳಿಸಿದ್ದರು, ನಂತರ ವೈದ್ಯರಿಗೆ ಕರೆ ಮಾಡಿದ್ದರು.

Advertisement

ಸಿದ್ದಾರ್ಥ್ ಶುಕ್ಲಾ ದೇಹದಲ್ಲಿ ಯಾವುದೇ ಗಾಯದ ಕಲೆಗಳಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶುಕ್ಲಾ ಅವರ ಬಾವ ಹಾಗೂ ಸಂಬಂಧಿಕರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಶುಕ್ಲಾ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು. ಸಿದ್ದಾರ್ಥ್ ಕುಟುಂಬ ಸದಸ್ಯರು ಹಾಗೂ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಸಿದ್ದಾರ್ಥ್ ಸಾವಿನ ಬಗ್ಗೆ ಕುಟುಂಬ ಸದಸ್ಯರು ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ ಎಂದು ವರದಿ ಹೇಳಿದೆ.

ಸಿದ್ದಾರ್ಥ್ ಸಾವಿನ ಬಗ್ಗೆ ವೈದ್ಯರು ಹೇಳಿದ್ದೇನು?

ನಟ ಸಿದ್ದಾರ್ಥ ಶುಕ್ಲಾ ದೇಹದಲ್ಲಿ ಯಾವುದೇ ಗಾಯದ ಕಲೆಗಳು ಕಂಡುಬಂದಿಲ್ಲ. ಶುಕ್ಲಾ ಸಾವಿನ ಬಗ್ಗೆ ಆರಂಭಿಕವಾಗಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲವಾಗಿತ್ತು. ಶುಕ್ಲಾ ಅವರನ್ನು ಬಾವ ಹಾಗೂ ಸಂಬಂಧಿಕರು ಮತ್ತು ಮೂವರು ಸ್ನೇಹಿತರು ಕೂಪರ್ ಆಸ್ಪತ್ರೆಗೆ ಆ್ಯಂಬುಲೆನ್ಸ್ ನಲ್ಲಿ ತಂದಿದ್ದು, ಅದಾಗಲೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.

ಶುಕ್ಲಾ ಅವರು ಶೋಬಿಜ್ ನಲ್ಲಿ ರೂಪದರ್ಶಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ಬಳಿಕ ಬಬುಲ್ ಕಾ ಆಂಗನ್ ಚೂಟೇ ನಾ ಟಿವಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರ ಜಾನೇ ಪೆಹಜಾನೇ ಸೆ ಯೇ ಅಜ್ನನಬಿ, ಲವ್ ಯೂ ಜಿಂದಗಿ ಧಾರವಾಹಿಯಲ್ಲಿ ನಟಿಸಿದ್ದರೂ ಕೂಡಾ ಬಾಲಿಕಾ ವಧು ಮೂಲಕ ಸಿದ್ದಾರ್ಥ್ ಜನಪ್ರಿಯರಾಗಿದ್ದರು.

ಝಲಕ್ ದಿಖ್ಲಾ ಜಾ 6, ಫಿಯರ್ ಫ್ಯಾಕ್ಟರ್; ಖತ್ರೋನ್ ಕೆ ಕಿಲಾಡಿ 7 ಹಾಗೂ ಬಿಗ್ ಬಾಸ್ 13 ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅಲ್ಲದೇ ಬಿಗ್ ಬಾಸ್ 13ನೇ ಸೀಸನ್ ನಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next