Advertisement

TMC; ರಾಜಕೀಯ ಕ್ಷೇತ್ರ ತುಂಬಾ ವಿಭಿನ್ನ:ಪ್ರಚಾರದ ವೇಳೆ ಯೂಸುಫ್ ಪಠಾಣ್

04:58 PM Mar 21, 2024 | Team Udayavani |

ಬರ್ಹಾಂಪೋರ್‌ : ಪಶ್ಚಿಮ ಬಂಗಾಳದ ಬರ್ಹಾಂಪೋರ್‌ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಪ್ರಚಾರದ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿ ರಾಜಕೀಯ ರಂಗದ ಅನುಭವ ಹಂಚಿಕೊಂಡಿದ್ದಾರೆ.

Advertisement

”ರಾಜಕೀಯ ಕ್ಷೇತ್ರವು ತುಂಬಾ ವಿಭಿನ್ನವಾಗಿದ್ದು, ಜನರ ನಿರೀಕ್ಷೆಗಳು ಒಂದೇ ಆಗಿರುತ್ತವೆ. ನಾನು ಜನರಿಗಾಗಿ ಕೆಲಸ ಮಾಡುತ್ತೇನೆ ಮತ್ತು ನನ್ನ ಪಕ್ಷ ಮಾಡಿದ ಕೆಲಸವನ್ನು ಮುಂದುವರಿಸುತ್ತೇನೆ” ಎಂದಿದ್ದಾರೆ.

‘ನಾನು 2007 ರ ವಿಶ್ವಕಪ್‌ ಗೆ ಇದ್ದಂತೆ ಇಲ್ಲಿಯೂ ಉತ್ಸುಕನಾಗಿದ್ದೇನೆ.  ಗುಜರಾತ್ ನನ್ನ ‘ಜನ್ಮಭೂಮಿ’ ಮತ್ತು ಪಶ್ಚಿಮ ಬಂಗಾಳ ನನ್ನ ‘ಕರ್ಮಭೂಮಿ’ ಎಂದು ಹೇಳಿದರು.

”ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ 5 ಬಾರಿ ಸಂಸದರಾಗಿದ್ದಾರೆ ಆದರೆ ಸಮಯ ಬದಲಾಗಿದೆ, ಬದಲಾವಣೆಯು ಒಳ್ಳೆಯದಕ್ಕಾಗಿ ಸಂಭವಿಸುತ್ತದೆ” ಎಂದು ಪಠಾಣ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next