Advertisement

Wenlock Hospital ಕೇರಳದ ಕೊಲ್ಲಂ ಮೂಲದ ವ್ಯಕ್ತಿ ಸಾವು

12:55 AM Jul 20, 2024 | Team Udayavani |

ಮಂಗಳೂರು: ಕೇರಳದ ಕೊಲ್ಲಂನ ಸುಮಾರು 65-70 ವರ್ಷದ ಅಬ್ದುಲ್‌ ನಾಸೀರ್‌ ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂರು ವಾರದ ಹಿಂದೆ ಬಂದಿದ್ದ ಅವರು ಉಳ್ಳಾಲ ದರ್ಗಾದಲ್ಲಿ ಉಳಿದುಕೊಂಡಿದ್ದರು.

Advertisement

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉಸಿರಾಟ ತೊಂದರೆಯಿಂದ ಏದುಸಿರು ಬಿಡುತ್ತಿದ್ದ ಹಿನ್ನೆಲೆಯಲ್ಲಿ ವೆನ್ಲಾಕ್‌ ಗೆ ದಾಖ ಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 5.7 ಅಡಿ ಎತ್ತರ, ದುಂಡು ಮುಖ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಬಿಳಿ ಕೂದಲು, ಬಿಳಿ ಗಡ್ಡ ಮೀಸೆ ಇದೆ. ಬಿಳಿ ಬಣ್ಣದ ಶರ್ಟ್‌ ಮತ್ತು ಲುಂಗಿ ಧರಿಸಿದ್ದಾರೆ. ಈ ಚಹರೆಯ ವ್ಯಕ್ತಿಯ ಮಾಹಿತಿ ಇದ್ದಲ್ಲಿ ನಗರ ಪೊಲೀಸ್‌ ಕಂಟ್ರೋಲ್‌ ರೂಮ್‌ ಅಥವಾ ಉಳ್ಳಾಲ ಠಾಣೆ  ಸಂಪರ್ಕಿಸಲು ತಿಳಿಸಲಾಗಿದೆ.

ಆಶ್ರಮದಲ್ಲಿದ್ದ ವೃದ್ಧೆ ಸಾವು
ಮಂಗಳೂರು/ಬಜಪೆ: ಪೊರ್ಕೋಡಿಯ ಹಿರಿಯರ ಮನೆ ಆಶ್ರಮದಲ್ಲಿ ವಾಸವಾಗಿದ್ದ ಹೊನ್ನಮ್ಮ (85) ಅಸೌಖ್ಯದಿಂದ ವೆನ್ಲಾಕ್‌ ಆಸ್ಪತ್ರೆಯಲ್ಲಿ ಜು.14ರಂದು ನಿಧನ ಹೊಂದಿದರು.

ಕಂದಾವರ ಕಿನ್ನಿಕಂಬಳ ನಿವಾಸಿಯಾಗಿದ್ದ ಹೊನ್ನಮ್ಮ ಅವರ ಪತಿ ಸುಮಾರು ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದು, ಸಂಬಂಧಿಕರು ಯಾರೂ ಇಲ್ಲದ ಕಾರಣ ನೆರೆಮನೆಯವರು ಪೊರ್ಕೋಡಿಯ ಆಶ್ರಮಕ್ಕೆ ಸೇರಿಸಿದ್ದರು. ಅಸೌಖ್ಯದ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದೆ ಅವರನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 5.2 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದಾರೆ. ಮೃತ ವೃದ್ಧೆಯ ವಾರಸುದಾರರು ಇದ್ದಲ್ಲಿ ಬಜಪೆ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ತಿಳಿಸಿದ್ದಾರೆ.

ಕುಸಿದು ಬಿದ್ದು ಯುವಕನ ಸಾವು
ಪೆರ್ಲ: ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದ ಕಾಟುಕುಕ್ಕೆ ನಿವಾಸಿ ಕೋಶಿ ಜೋನಿ ಅವರ ಪುತ್ರ ಅಲ್ವಿನ್‌ ಜೋಷಿ (28) ಅವರು ಆಸ್ಪತ್ರೆ ದಾರಿ ಮಧ್ಯೆ ಸಾವಿಗೀಡಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next