Advertisement

ರಥಯಾತ್ರೆಗೆ ಅದ್ಧೂರಿ ಸ್ವಾಗತ

05:11 PM Dec 13, 2019 | Suhan S |

ಕೊರಟಗೆರೆ: ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಸಂಕಲ್ಪದಂತೆ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಯಂತಿ ಅಂಗವಾಗಿ ಆಯೋಜಿಸಿರುವ ರಥಯಾತ್ರೆಗೆ ಪಟ್ಟಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ತಾಲೂಕು ವೀರಶೈವ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ, ರಥಯಾತ್ರೆ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಯೊಂದಿಗೆ 5 ಜಿಲ್ಲಾ ತಾಲೂಕುಗಳಲ್ಲಿ ಯಾತ್ರೆ ಪೂರೈಸಿ ತಾಲೂಕಿಗೆ ಆಗಮಿಸಿದ್ದು, ತಾಲೂಕಿನ ಮುಖಾಂತರ ಸಿದ್ಧರಬೆಟ್ಟದಿಂದ ತೋವಿನಕೆರೆ ಮಾರ್ಗವಾಗಿ ಚಿಕ್ಕತೊಟ್ಟುಕೆರೆ, ಕೆಸ್ತೂರು, ಬೆಳ್ಳಾವಿ, ಚೇಳೂರು, ಹೊಸಕೆರೆ, ಬೆಟ್ಟದಹಳ್ಳಿ, ತ್ಯಾಗಟೂರು, ನಿಟ್ಟೂರು, ಮಲ್ಲಸಂದ್ರದ ಮೂಲಕ ಸಿದ್ಧಗಂಗಾ ಮಠ ತಲುಪಲಿದೆ ಎಂದು ಹೇಳಿದರು.

Advertisement

ತಾಲೂಕು ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಪರ್ವತಯ್ಯ ಮಾತನಾಡಿ, ರಥಯಾತ್ರೆಯು ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಜಿಲ್ಲೆ ಪ್ರವಾಸ ಮಾಡಿ ಜ.5ರಂದು ಕುಣಿಗಲ್‌ ತಾಲೂಕಿನ ತಪೋಕ್ಷೇತ್ರ ಕಗ್ಗೆರೆಯಲ್ಲಿ ನಡೆಯುವ ಬೃಹತ್‌ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಪಪಂ ಸದಸ್ಯ ಪ್ರದೀಪ್‌ ಕುಮಾರ್‌, ರಾಜೇಶ್‌, ಮಹೇಶ್‌, ಉಮೇಶ್‌, ಗೀರಿಶ್‌, ಜಗನ್ನಾಥ್‌, ಸೋಮಶೇಖರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next