Advertisement

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ನಿರ್ಧಾರ ಸ್ವಾಗತ-ಯತ್ನಾಳ

12:26 PM Aug 05, 2019 | keerthan |

ವಿಜಯಪುರ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370 ಹಾಗೂ 35(A) ರದ್ದು ಮಾಡಿರುವ ಕೇಂದ್ರದ ನಿರ್ಧಾರ ಸ್ವಾಗತಿಸಿರುವ ವಿಜಯಪುರ ‌ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೇಂದ್ರದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪೂರ್ಣ ಬಹುಮತ ಬಂದರೆ ಜಮ್ಮು ಕಾಶ್ಮೀರಕ್ಕೆ ವಿಶೇಷವಾಗಿ ನೀಡಿದ್ದ ಕಲಂ 370 ಹಾಗೂ 35 ( A) ರದ್ದು ಮಾಡುವಿದಾಗಿ ನೀಡಿದ್ದ ಭರವಸೆ ಈಡೇರಿಸಿ ಬದ್ಧತೆ ತೋರಿದೆ‌. ನಾವು ನುಡಿದಂತೆ ನಡೆದಿದ್ದೇವೆ. ಶ್ಯಾಪ್ರಸಾದ್ ಮುಖರ್ಜಿ ಹಾಗೂ ಸರ್ಧಾರ್ ವಲ್ಲಭ ಭಾಯಿ ಪಟೇಲ್ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪಾಕ್ ಆಕ್ರಮಿಕ ಕಾಶ್ಮೀರವೂ‌ ಭಾರತಕ್ಕೆ ಸೇರಿ ಶೀಘ್ರದಲ್ಲಿ ಅಖಂಡ ಭಾರತ ಕಲ್ಪನೆ ಸಾಕಾರಗೊಳ್ಳಲಿದೆ. ಕಾಶ್ಮೀರದಲ್ಲಿ ಇನ್ನು ಶಾಶ್ವತ ಶಾಂತಿ ನೆಲೆಸಲಿದೆ ಎಂದರು.

ಭವಿಷ್ಯದಲ್ಲಿ ಯಾವುದೇ ಭಾರತೀಯ ಕಾಶ್ಮೀರದಲ್ಲಿ ಆಸ್ತಿ ಹೊಂದಲು ಅವಕಾಶ ಮುಕ್ತವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next