Advertisement

ವೀಕೆಂಡ್ ಕರ್ಪ್ಯೂ: ನಿಗದಿತ ಪ್ರಯಾಣಿಕರಾಗದೇ ಮುಂದೆ ಹೋಗದ ಬಸ್ಸುಗಳು

05:48 PM Jan 08, 2022 | Team Udayavani |

ದಾಂಡೇಲಿ: ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ವೀಕೆಂಡ್ ಕರ್ಪ್ಯೂವನ್ನು ಜಾರಿಗೊಳಿಸಿದ್ದು, ದಾಂಡೇಲಿಯಲ್ಲಿ ವೀಕೆಂಡ್ ಕರ್ಪ್ಯೂ ಕಟ್ಟಿನಿಟ್ಟಿನಿಂದ ಜಾರಿಯಲ್ಲಿದೆ. ಈ ನಡುವೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾದರೇ, ಇನ್ನೂ ಸಾರಿಗೆ ಸಿಬ್ಬಂದಿಗಳು ನಿಗಧಿತ ಸಂಖ್ಯೆಯ ಪ್ರಯಾಣಿಕರಿಗಾಗಿ ಕಾಯುವಂತಾಗಿದೆ.

Advertisement

ಪರಿಣಾಮವಾಗಿ ನಗರದ ಬಸ್ ನಿಲ್ದಾಣದಿಂದ ಬಸ್ಸುಗಳು ಮುಂದೆ ಹೋಗದೇ ಪ್ರಯಾಣಿಕರಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಮಾಹಿತಿಯ ಪ್ರಕಾರ ಒಂದು ಬಸ್ಸಿನಲ್ಲಿ 30 ಪ್ರಯಾಣಿಕರನ್ನು ಕರೆದುಕೊಂಡು ಹೋಗಬೇಕಾಗಿರುವುದರಿಂದ ಅಷ್ಟೊಂದು ಸಂಖ್ಯೆಯಲ್ಲಿ ಆಯಾಯ ಬಸ್ಸಿಗೆ ಪ್ರಯಾಣಿಕರು ಆಗುತ್ತಿಲ್ಲ. ಆ ಕಾರಣದಿಂದ ನಿಗದಿತ ಸಮಯಕ್ಕೆ ಬಸ್ ಬಿಡಲಾಗುತ್ತಿಲ್ಲ. ಇದರಿಂದ ಬಸ್ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಇನ್ನೂ ಸಾರ್ವಜನಿಕರು ಸಹ ವೀಕೆಂಡ್ ಕರ್ಪ್ಯೂ ಸಮಯದಲ್ಲಿ ಹೊರಗಡೆ ಹೋಗುವುದನ್ನು ಮುಂದೂಡುವುದೇ ಒಳಿತೆಂಬ ಮಾತು ಕೇಳಿಬರುತ್ತಿದೆ. ಜೋಯಿಡಾದ ರಾಮನಗರ ಬಸ್ ನಿಲ್ದಾಣದಿಂದ ಬಂದಿರುವ ಬಸ್ಸಿನಲ್ಲಿ ಒಬ್ಬನೆ ಒಬ್ಬ ಪ್ರಯಾಣಿಕ ಬಂದಿರುವುದು ವಿಶೇಷವಾಗಿತ್ತು. 30 ಕ್ಕಿಂತ ಕಡಿಮೆ ಪ್ರಯಾಣಿಕರಿದ್ದಲ್ಲಿ ಬಸ್ ಹೋಗುವುದಾದರೂ ಹೇಗೆ, ನಷ್ಟದಲ್ಲಿ ಹೋಗಬೇಕಾದ ಸ್ಥಿತಿ ಇದೆ.

ಸಾರಿಗೆ ಬಸ್ಸುಗಳ ಚಾಲಕರು, ನಿರ್ವಾಹಕರು ಮಾತ್ರ ಕರ್ತವ್ಯಕ್ಕೆ ಅಣಿಯಾಗಿದ್ದಾರೆ. ನಿಗಧಿತ ಸಂಖ್ಯೆಯ ಪ್ರಯಾಣಿಕರ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇನ್ನೂ ಬಂದಿರುವ ಪ್ರಯಾಣಿಕರು ಬಸ್ಸು ಬಿಡುವುದಕ್ಕಾಗಿ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಅತ್ತ ಸಾರಿಗೆ ಸಿಬ್ಬಂದಿಗಳಲ್ಲಿ ಮತ್ತು ಇತ್ತ ಪ್ರಯಾಣಿಕರಲ್ಲಿ ಗೊಂದಲ ಏರ್ಪಟ್ಟಿರುವುದಂತು ನಿಜ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next