Advertisement

ವೀಕೆಂಡ್‌ ಕರ್ಫ್ಯೂ ಉದ್ದೇಶಪೂರ್ವಕ ನಿರ್ಧಾರವಲ್ಲವೇ: ಡಿ.ಕೆ ಶಿವಕುಮಾರ್ ಪ್ರಶ್ನೆ

09:40 AM Jan 08, 2022 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್‌ ಪ್ರೇರಿತ ವೀಕೆಂಡ್‌ ಕರ್ಫ್ಯೂ ಬಗ್ಗೆ ವೈಜ್ಞಾನಿಕವಾಗಿ ಮಾತನಾಡುತ್ತಿಲ್ಲ, ಬದಲಾಗಿ ರಾಜಕೀಯವಾಗಿ ಮಾತನಾಡುತ್ತಿದೆ. ಇಡೀ ರಾಜ್ಯದ ಯಾವ ಪ್ರವಾಸಿ ತಾಣವನ್ನೂ ಬಂದ್‌ ಮಾಡಿಲ್ಲ. ಆದರೆ, ಕನಕಪುರದ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್‌ ಮಾಡಿಸಲಾಗಿದೆ. ಇದು ಉದ್ದೇಶಪೂರ್ವಕ ನಿರ್ಧಾರವಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

Advertisement

ಈ ಬಗ್ಗೆ ಕೂ ಮಾಡಿರುವ ಅವರು, ಲಾಕ್‌ ಡೌನ್‌ ಘೋಷಿಸಲು ರಾಜ್ಯ ಸರ್ಕಾರದ ಬಳಿ ವೈಜ್ಞಾನಿಕ ಕಾರಣಗಳೇ ಇಲ್ಲ. ನಿನ್ನೆ ರಾಜ್ಯದ ಪಾಸಿಟಿವಿಟಿ ದರ (ಟಿಪಿಆರ್‌) 3.95ರಷ್ಟಿತ್ತು. ಶೇ. 5 ತಲುಪಿದರೆ ಲಾಕ್‌ಡೌನ್‌ ಘೋಷಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಕಳೆದ ವರ್ಷ ಪಾಸಿಟಿವಿಟಿ ದರ 32.89%ರಷ್ಟು ತಲುಪಿದಾಗ ಲಾಕ್‌ಡೌನ್‌ ಘೋಷಿಸಲಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ:ವೀಕೆಂಡ್ ಕರ್ಫ್ಯೂ: ಎಲ್ಲವೂ ಬಂದ್.. ಆದರೆ ಪ್ರವಾಸಕ್ಕೆ ಹೋಗಲು ಇದೆ ಅನುಮತಿ! ನಿಯಮಗಳ ಅನ್ವಯ

ರಾಜ್ಯ ಸರ್ಕಾರ ಮೇಕೆದಾಟು ಪಾದಯಾತ್ರೆ ತಡೆಯಲು ವೀಕೆಂಡ್‌ ಕರ್ಫ್ಯೂ ಘೋಷಿಸಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಕೆಪಿಸಿಸಿ ವತಿಯಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿನ ವಾಸ್ತವ ಸ್ಥಿತಿ ಬಗ್ಗೆ ವರದಿ ತರಿಸಿಕೊಳ್ಳಲಾಗಿದೆ. ಪ್ರಕರಣಗಳ ಸಂಖ್ಯೆ ಸಾಮಾನ್ಯವಾಗೇ ಇದೆ. ಇಂಥಹ ಕಠಿಣ ನಿರ್ಧಾರ ತೆಗೆದುಕೊಳ್ಳುವ ಔಚಿತ್ಯ ಇರಲಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

Koo App

Advertisement

Udayavani is now on Telegram. Click here to join our channel and stay updated with the latest news.

Next