Advertisement

ವಾರಾಂತ್ಯದ ಕರ್ಫ್ಯೂ : ಮಣಿಪಾಲ ಸೇರಿದಂತೆ ಉಡುಪಿ ನಗರದಲ್ಲಿ ಹೆಚ್ಚಿದ ವಾಹನ ಓಡಾಟ

07:59 PM Jul 03, 2021 | Team Udayavani |

ಉಡುಪಿ : ಜಿಲ್ಲೆಯಲ್ಲಿ ಕೋವಿಡ್‌ -19 ನಿಯಂತ್ರಣ ಕುರಿತು ವಾರಾಂತ್ಯದ ಕರ್ಫ್ಯೂ ಜಾರಿಯಲಿದ್ದು, ಶನಿವಾರ ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ಜನರ ಓಡಾಟಕ್ಕೆ ನಿಷೇಧವಿತ್ತು.

Advertisement

ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ದಿನಸಿ ಸಹಿತ ಅಗತ್ಯ ವಸ್ತು ಮಾರಾಟಕ್ಕೆ ಸಂಬಂಧಿಸಿದ ಅಂಗಡಿ-ಮುಂಗಟ್ಟುಗಳು ಬೆಳಗ್ಗೆ 6 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ತೆರೆದಿದ್ದವು.

ಉಳಿದೆಲ್ಲ ವಾಣಿಜ್ಯ ಚಟುವಟಿಕೆ, ವ್ಯಾಪಾರ ವಹಿವಾಟು ಸ್ತಬ್ಧವಾಗಿತ್ತು. ಮಣಿಪಾಲ ಸೇರಿದಂತೆ ಉಡುಪಿ ನಗರದ ಕೆಲ ಭಾಗದಲ್ಲಿ ವಾಹನ ಸಂಚಾರ ಹೆಚ್ಚಿತ್ತು. ರವಿವಾರವೂ ಇದೇ ರೀತಿ ಮುಂದುವರಿಯಲಿದೆ.

ಇದನ್ನೂ ಓದಿ :3ನೇ ಹಂತದ ಅನ್ ಲಾಕ್ : ದೇವಸ್ಥಾನ, ಶಾಪಿಂಗ್ ಮಾಲ್ ಗಳಿಗೆ ಅನುವು : ಸಿನಿ ಪ್ರಿಯರಿಗೆ ಶಾಕ್

Advertisement

Udayavani is now on Telegram. Click here to join our channel and stay updated with the latest news.

Next