Advertisement

ಗಂಗಾ ಸಾಗರ್‌ ಉತ್ಸವ: ಪ.ಬಂಗಾಲ ಸರಕಾರದಿಂದ ವೆಬ್‌ ಸೈಟ್‌

12:14 PM Jan 09, 2018 | Team Udayavani |

ಕೋಲ್ಕತ : ಮುಂಬರುವ ಗಂಗಾ ಸಾಗರ್‌ ಉತ್ಸವದ ವೇಳೆ ಜಮಾವಣೆಗೊಳ್ಳುವ ಜನಸಾಗರದ ನಡುವೆ ಆಕಸ್ಮಿಕವಾಗಿ ತಮ್ಮ ಕುಟುಂಬದವರಿದಂದ ಬೇರ್ಪಡುವವರನ್ನು ಮತ್ತೆ ಅವರ ಮನೆಯವರೊಂದಿಗೆ ಸೇರಿಸುವ ಪ್ರಯತ್ನದ ಅಂಗವಾಗಿ ವಿಶಿಷ್ಟ  ವೆಬ್‌ ಸೈಟ್‌ ಒಂದನ್ನು ವಿನ್ಯಾಸಗೊಳಿಸಲು ಪಶ್ಚಿಮ ಬಂಗಾಲ ಸರಕಾರ ಸಾರ್ವಜನಿಕ ಸೇವಾ ಸಂಸ್ಥೆಯೊಂದಿಗೆ ಕೈಜೋಡಿಸಿದೆ. 

Advertisement

ಈ ಪ್ರಸ್ತಾವಿತ ವೆಬ್‌ ಸೈಟನ್ನು ಪಶ್ಚಿಮ ಬಂಗಾಲ ಸರಕಾರದ ಪ್ರಕೋಪ ನಿರ್ವಹಣ ಇಲಾಖೆ, ರಾಜ್ಯ ಪೊಲೀಸ್‌ ದಳ, ರಾಜ್ಯದ ಇಂಟರ್‌ ಏಜನ್ಸಿ ಸಮೂಹ (ಐಎಜಿ) ಮತ್ತು ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಅಮೆಚೂರ್‌ ರೇಡಿಯೋ (ಎನ್‌ಐಎಆರ್‌ –  ಹೈದರಾಬಾದ್‌ ಮೂಲದ 1983ರಲ್ಲಿ ನೋಂದಾವಣೆಗೊಂಡಿದ್ದ ಸರಕಾರೇತರ ಸೇವಾ ಸಂಘಟನೆ) ಸೇರಿಕೊಂಡು ವಿನ್ಯಾಸಗೊಳಿಸುತ್ತಿವೆ ಎಂದು ಸರಕಾರಿ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next