Advertisement

`ಛತ್ತೀಸ್‌ಗಢ ಪೊಲೀಸರ ಮೇಲಿನ ನಕ್ಸಲ್‌ ದಾಳಿಯನ್ನು ನಾವು ಮರೆಯುವುದಿಲ್ಲ’: PM ಮೋದಿ ಟ್ವೀಟ್‌

07:11 PM Apr 26, 2023 | Team Udayavani |

ನವದೆಹಲಿ: ಛತ್ತೀಸ್‌ಗಢದ ದಾಂಟೇವಾಡದಲ್ಲಿ ನಡೆದ ನಕ್ಸಲ್‌ ದಾಳಿಗೆ 10 ಪೋಲಿಸರು, ಓರ್ವ ಚಾಲಕ ಸೇರಿ 11 ಮಂದಿ ಮೃತಪಟ್ಟಿದ್ದಾರೆ.  ಈ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ʻನಕ್ಸಲ್‌ ದಾಳಿಯಲ್ಲಿ ಮೃತರಾದ ಪೋಲಿಸರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲʼ ಎಂದು ಹೇಳಿದ್ದಾರೆ.

Advertisement

ಛತ್ತೀಸ್‌ಗಢ ಪೋಲಿಸರ ಮೇಲೆ ದಾಂಟೇವಾಡದಲ್ಲಿ ನಡೆದ ನಕ್ಸಲ್‌ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಘಟನೆಯಲ್ಲಿ ಹುತಾತ್ಮರಾದ ಧೀರ ಸಿಬ್ಬಂದಿಗಳಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ. ಈ ತ್ಯಾಗ ವನ್ನು ನಾವು ಸದಾ ನೆನಪಿನಲ್ಲಿಟ್ಟಿರುತ್ತೇವೆ. ಹುತಾತ್ಮರ ಕುಟುಂಬಗಳಿಗೆ ನನ್ನ ಸಾಂತ್ವಾನʼ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

 

ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರೂ ಛತ್ತೀಸ್‌ಗಢ  ಮುಖ್ಯಮಂತ್ರಿ ಭೂಪೇಂದ್ರ ಬಾಘೇಲ್‌ ಅವರಿಗೆ ಕರೆ ಮಾಡಿ ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳಿದ್ದು, ಘಟನೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅಮಿತ್‌ ಶಾ ʻಇದೊಂದು ಹೇಡಿ ಕೃತ್ಯʼ ಎಂದು ಕಿಡಿ ಕಾರಿದ್ದಾರೆ.

 

ಇದನ್ನೂ ಓದಿ: IED ಗೆ 11 ಯೋಧರು ಹುತಾತ್ಮ: ದಾಂತೇವಾಡದಲ್ಲಿ ನಕ್ಸಲರ ಅಟ್ಟಹಾಸ

Advertisement

Udayavani is now on Telegram. Click here to join our channel and stay updated with the latest news.

Next