Advertisement

ಎಲ್ಲ ಭಯೋತ್ಪಾದನೆ ಹತ್ತಿಕ್ಕುತ್ತೇವೆ : ಕೋಟ ಶ್ರೀನಿವಾಸ ಪೂಜಾರಿ

01:04 AM Jul 30, 2022 | Team Udayavani |

ಕುಂದಾಪುರ: ಧರ್ಮಾಂ ಧತೆ ಒಂದು ಜಾತಿಗೆ ಸೀಮಿತವಲ್ಲ. ಎಲ್ಲ ಜಾತಿಯ ಹಿಂದುತ್ವವಾದಿ ಗಳನ್ನು, ಬಿಜೆಪಿ ಕಾರ್ಯಕರ್ತರನ್ನು ಕೊಲ್ಲು ವಂಥ ವ್ಯವಸ್ಥಿತ ಸಂಚು ನಡೆಯುತ್ತಿದೆ.

Advertisement

ಯಾರನ್ನೇ ಕೊಂದರೂ ಹತ್ಯೆ ಎಂದು ಪರಿಗಣಿಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಇದರ ಹಿಂದಿನ ಎಲ್ಲ ಬಗೆಯ ಭಯೋತ್ಪಾದನೆಯನ್ನು ಹತ್ತಿಕ್ಕುತ್ತೇವೆ ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶುಕ್ರವಾರ ಇಲ್ಲಿನ ಮಿನಿ ವಿಧಾನ ಸೌಧದಲ್ಲಿ, ಬಿಜೆಪಿಯಲ್ಲಿರುವ ಬಿಲ್ಲವ ರನ್ನೇ ಹುಡುಕಿ ಕೊಲ್ಲ ಲಾಗುತ್ತಿದೆ ಎಂಬ ಆರೋಪ ಇದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿ, ಶರತ್‌ ಮಡಿವಾಳ ಸಹಿತ ಬೇರೆ ಸಮುದಾಯದ ಕಾರ್ಯಕರ್ತರೂ ಮೃತ ಪಟ್ಟಿದ್ದಾರೆ. ಸಾವನ್ನು ಜಾತಿ ದೃಷ್ಟಿಯಿಂದ ನೋಡಲಾಗದು. ಯಾವುದೇ ಜಾತಿ ಧರ್ಮದವರನ್ನೂ ಕೊಲೆ ಮಾಡಬಾರದು ಎಂದರು.

ರಾಜೀನಾಮೆ ಹಿಂದೆ ಕಳಕಳಿ
ಬಿಜೆಪಿ ಪದಾಧಿಕಾರಿಗಳ ಸಾಲು ಸಾಲು ರಾಜೀನಾಮೆ ಕುರಿತು, ಕಾರ್ಯ ಕರ್ತರಿಗೆ ಕೋಪ, ನೋವಾ ದಾಗ ಇವೆಲ್ಲವೂ ಸಹಜ. ಅವರೆಲ್ಲರ ಆಕ್ರೋಶದ ಹಿಂದೆ ಸಮಾಜದ ಕಳಕಳಿ ಇದೆ. ಅದನ್ನು ಅರ್ಥ ಮಾಡಿ ಕೊಂಡು ಕಾರ್ಯ ಕರ್ತರ ಹೇಳಿರುವ ಸಂಗತಿ ಬಗ್ಗೆ ಗಮನ ಕೊಡುತ್ತೇವೆ ಎಂದು ರಾಜ್ಯಾಧ್ಯಕ್ಷರು ಹಾಗೂ ಸಿಎಂ ತಿಳಿಸಿದ್ದಾರೆ ಎಂದರು.

ಸಂಘರ್ಷ ತಡೆ ಕಾನೂನು
ಕೋಮು ಸಂಘರ್ಷ ನಿಷೇಧ ಕಾಯ್ದೆಯಿಂದ ಇಂತಹ ಗೂಂಡಾ ಗಿರಿ, ಮಾನವ ಹತ್ಯೆಗಳು ನಿಲ್ಲುತ್ತವೆ ಎನ್ನುವುದಾದರೆ ಕಾಯ್ದೆ ತರುವ ಬಗ್ಗೆ ಚರ್ಚಿಸುತ್ತೇವೆ. ನಡೆದ ಪ್ರಕರಣಗಳಿಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಜಾಗ್ರತೆ ವಹಿಸುತ್ತೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next