Advertisement

ನಮಗೆ ‘ಮೇಡ್ ಇನ್ ಇಂಡಿಯಾ’ಬೇಕು, ‘ಮೇಡ್ ಇನ್ ಚೈನಾ’ಅಲ್ಲ: ಕೇಂದ್ರದ ವಿರುದ್ಧ ರಾಹುಲ್ ಟೀಕೆ

09:44 AM Nov 15, 2022 | Team Udayavani |

ಹಿಂಗೋಲಿ: ಕಾಂಗ್ರೆಸ್‌ ನ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರು ರೈತರ ಸಮಸ್ಯೆಗಳನ್ನು ಕಡೆಗಣಿಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಹಿಂಗೋಲಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ನಮಗೆ `ಮೇಡ್ ಇನ್ ಇಂಡಿಯಾ ಬೇಕು, `ಮೇಡ್ ಇನ್ ಚೈನಾ ಅಲ್ಲ ಎಂದರು.

ಬಿಜೆಪಿ ಸರಕಾರ ರೈತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರೂ ಪರಿಹಾರ ನೀಡುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.

“ಅಕಾಲಿಕ ಮಳೆ ಮತ್ತು ಇತರ ಸಮಸ್ಯೆಗಳಿಂದ ರೈತರ ಭೂಮಿ ನಾಶವಾದರೆ ಅವರಿಗೆ ಬಿಮಾ ಯೋಜನೆಯಿಂದ ಪರಿಹಾರ ಧನ ನೀಡಲಾಗುವುದು ಎಂದು ಬಿಜೆಪಿ ಹೇಳಿದೆ. ಆದರೆ ಏನೂ ಆಗಲಿಲ್ಲ. ಈ ಸರ್ಕಾರ ಕೇವಲ ಭರವಸೆಗಳನ್ನು ನೀಡುತ್ತದೆ” ಎಂದು ರಾಹುಲ್ ಹೇಳಿದರು.

ಇದನ್ನೂ ಓದಿ:ಪ್ರವಾಸೋದ್ಯಮ ನೀತಿಯಲ್ಲಿ ಕಂಬಳ : ಕೇಂದ್ರ ಸಚಿವರ ಭರವಸೆ

Advertisement

“ಬೆಳಗ್ಗೆ ಎದ್ದು ಕೂಲಿ ಮಾಡುವವರು ರೈತರೇ, ಶ್ರಮ ಪಟ್ಟರೂ ಸರ್ಕಾರ ಅವರ ಉತ್ಪನ್ನಗಳಿಗೆ ಸೂಕ್ತ ದರ ನೀಡುತ್ತಿಲ್ಲ, ರಫ್ತು ನಿಲ್ಲಿಸಿದ್ದಾರೆ, ಈ ಸರ್ಕಾರದಲ್ಲಿ ತೈಲ ಮತ್ತು ಅನಿಲ ದರಗಳು ಕುಸಿದಿವೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುಟುಂಬಕ್ಕೆ ಒಂದು ರೂಪಾಯಿ ನೀಡುವುದಿಲ್ಲ ಎಂದು ರಾಹುಲ್ ಹೇಳಿದರು.

“ಕ್ಯಾಮೆರಾಗಳು, ಮೊಬೈಲ್‌ಗಳು ಮತ್ತು ಬಟ್ಟೆಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದರಿಂದ ಚೀನಾದ ರಫ್ತುದಾರರಿಗೆ ಇದರಿಂದ ಅನುಕೂಲವಾಗುತ್ತದೆ. ನಮಗೆ ಇಲ್ಲ. ಹೀಗಾಗಿ ನಮಗೆ ಮೇಡ್ ಇನ್ ಚೈನಾ ಉತ್ಪನ್ನಗಳು ಬೇಡ, ನಮಗೆ ಮೇಡ್ ಇನ್ ಇಂಡಿಯಾ, ಮೇಡ್ ಇನ್ ಮಹಾರಾಷ್ಟ್ರ, ನಾಸಿಕ್, ಹಿಂಗೋಲಿ ಮಾತ್ರ ಬೇಕು ಎಂದು ಅವರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next