Advertisement

Cheetah ಗಳ ಮೃತ್ಯು: ಜವಾಬ್ದಾರಿ ತೆಗೆದುಕೊಳ್ಳುತ್ತೇವೆ: ಕೇಂದ್ರ ಪರಿಸರ ಸಚಿವ

10:35 PM Jun 01, 2023 | Team Udayavani |

ಹೊಸದಿಲ್ಲಿ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ತಿಂಗಳಲ್ಲಿ ಮೂರು ಚೀತಾಗಳು ಮತ್ತು ಮೂರು ಮರಿಗಳು ಸಾವನ್ನಪ್ಪಿದ್ದು, ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಗುರುವಾರ, “ಏನೇ ಸಂಭವಿಸಿದರೂ ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ, ಆದರೆ ಸ್ಥಳಾಂತರ ಯೋಜನೆಯು ಯಶಸ್ಸು ಪ್ರಮುಖವಾದುದು ಎಂದು ಪ್ರತಿಪಾದಿಸಿದರು.

Advertisement

ಟೈಮ್ಸ್ ನೆಟ್‌ವರ್ಕ್‌ನ ಕಾನ್ಕ್ಲೇವ್‌ನಲ್ಲಿ ಪ್ರಶ್ನೆಗೆ ಉತ್ತರಿಸಿ.”ಇದು ಅಂತಾರಾಷ್ಟ್ರೀಯ ಯೋಜನೆಯಾಗಿದೆ ಮತ್ತು ನಾವು ಮರಣವನ್ನು ನಿರೀಕ್ಷಿಸಿದ್ದೇವು. ನಮ್ಮ ವರದಿಯಲ್ಲೂ ಇದನ್ನು ಉಲ್ಲೇಖಿಸಲಾಗಿದೆ (ಚೀತಾ ಪರಿಚಯ ಕ್ರಿಯಾ ಯೋಜನೆ). ಚೀತಾಗಳಲ್ಲಿ ಒಂದು ಭಾರತಕ್ಕೆ ಬರುವ ಮೊದಲು ಅಸ್ವಸ್ಥವಾಗಿತ್ತು. ಇನ್ನೆರಡು ಸಾವಿಗೆ ನಾವು ಕಾರಣಗಳನ್ನು ಒದಗಿಸಿದ್ದೇವೆ ಎಂದು ಹೇಳಿದ್ದಾರೆ.

“ತೀವ್ರವಾದ ಶಾಖದಿಂದ ಮೂರು ಮರಿಗಳು ಸಾವನ್ನಪ್ಪಿವೆ. ತಾಪಮಾನವು 47 ಡಿಗ್ರಿ ಸೆಲ್ಸಿಯಸ್‌ಗೆ ಏರಿತು … ಏನೇ ಸಂಭವಿಸಿದರೂ ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಆದರೆ, ಯೋಜನೆಯು ದೊಡ್ಡ ಯಶಸ್ಸನ್ನು ಪಡೆಯುತ್ತದೆ ಮತ್ತು ಇಡೀ ದೇಶವು ಅದರ ಬಗ್ಗೆ ಹೆಮ್ಮೆಪಡುತ್ತದೆ” ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶದ ಕುನೋದಲ್ಲಿ ಕ್ವಾರಂಟೈನ್ ಆವರಣಕ್ಕೆ ನಮೀಬಿಯಾದಿಂದ ಎಂಟು ಚೀತಾಗಳ ಮೊದಲ ಬ್ಯಾಚ್ ಅನ್ನು ಬಿಡುಗಡೆ ಮಾಡಿದ್ದರು. ಅಂತಹ ಎರಡನೇ ಸ್ಥಳಾಂತರದಲ್ಲಿ, 12 ಚಿರತೆಗಳನ್ನು ದಕ್ಷಿಣ ಆಫ್ರಿಕಾದಿಂದ ತರಲಾಗಿತ್ತು ಫೆಬ್ರವರಿ 18 ರಂದು ಕುನೊಗೆ ಬಿಡಲಾಗಿತ್ತು.

ಮಾರ್ಚ್ ಮತ್ತು ಎಪ್ರಿಲ್‌ನಲ್ಲಿ ಮೂರು ಚೀತಾಗಳು ಸಾವನ್ನಪ್ಪಿದ್ದವು. ಉಳಿದಿರುವ 17 ವಯಸ್ಕ ಚೀತಾಗಳಲ್ಲಿ ಏಳನ್ನು ಈಗಾಗಲೇ ಕಾಡಿಗೆ ಬಿಡಲಾಗಿದೆ. ಮೂರು ವಯಸ್ಕ ಚೀತಾಗಳ ಸಾವು ಮತ್ತು ಹೆಣ್ಣು ನಮೀಬಿಯಾದ ಚೀತಾ ಸಿಸಯಾಗೆ ಜನಿಸಿದ ನಾಲ್ಕು ಮರಿಗಳಲ್ಲಿ ಮೂರು ಮರಿಗಳ ಮೃತ್ಯು ವನ್ಯಜೀವಿ ನಿರ್ವಹಣೆಯ ಸೂಕ್ತತೆಯ ಬಗ್ಗೆ ಹಲವಾರು ತಜ್ಞರಿಂದ ಪ್ರಶ್ನೆಗಳನ್ನು ಎದುರಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next