Advertisement

ಜೆಡಿಎಸ್‌ ವಿಪ್‌ ಗೂ  ನಮಗೂ ಸಂಬಂಧವಿಲ್ಲ: ಚೆಲುವರಾಯಸ್ವಾಮಿ

06:35 AM Mar 12, 2018 | Team Udayavani |

ಮಂಡ್ಯ: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ವರಿಷ್ಠರು ಜಾರಿಗೊಳಿಸಿರುವ ವಿಪ್‌ ಗೂ  ನಮಗೂ (ಬಂಡಾಯ ಶಾಸಕರು) ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

Advertisement

ಜೆಡಿಎಸ್‌ನಿಂದ ನಮ್ಮನ್ನು ವರಿಷ್ಠರು ಅಮಾನತ್ತಿನಲ್ಲಿಟ್ಟಿದ್ದಾರೆ. ಈಗಾಗಲೇ ನಮ್ಮ ವಿರುದ್ಧ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪ್ರಚಾರವನ್ನೂ ನಡೆಸಿದ್ದಾರೆ. ಹೀಗಿದ್ದೂ ಜೆಡಿಎಸ್‌ ವರಿಷ್ಠರು ವಿಪ್‌ ಜಾರಿ ಮಾಡಿರುವುದು ಅರ್ಥವಾಗದ ಸಂಗತಿ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್‌ ಸೇರ್ಪಡೆಗೆ ನಾವು ಪೂರ್ಣ ಪ್ರಮಾಣದಲ್ಲಿ ತೀರ್ಮಾನಿಸಿದ್ದೇವೆ. ಕಾಂಗ್ರೆಸ್‌ ಬಾವುಟ ಹಿಡಿಯುವುದೊಂದೇ ಬಾಕಿ ಇದೆ. ಈಗ ಜೆಡಿಎಸ್‌ನವರು ನಮ್ಮನ್ನು ಬಯಸುವುದು ಸಮಂಜಸವಲ್ಲ. ಜೆಡಿಎಸ್‌ನ ದೊಡ್ಡವರು ವಿಪ್‌ ಜಾರಿ ಮಾಡಿದ್ದಾರೆ. ಅವರ ಬಗ್ಗೆ ನಾವೇನೂ ಹೇಳುವುದಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್‌ ಪರ ಮತ ಚಲಾಯಿಸುವುದು ಖಚಿತ ಎಂದರು.

25ಕ್ಕೆ ಸೇರ್ಪಡೆ: ಜೆಡಿಎಸ್‌ನ ಏಳು ಮಂದಿ ಬಂಡಾಯ ಶಾಸಕರು ಮಾ.25ರಂದು ಕಾಂಗ್ರೆಸ್‌ ಸೇರ್ಪಡೆಯಾಗುವುದು ಖಚಿತ. ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಂಡಿದ್ದೇವೆ. ರಾಹುಲ್‌ಗಾಂಧಿ ರಾಜ್ಯ ಪ್ರವಾಸ ನಡೆಸುವ ಸಮಯದಲ್ಲೇ ಎಲ್ಲರೂ ಅಧಿಕೃತವಾಗಿ ಕಾಂಗ್ರೆಸ್‌ ಸೇರಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next