Advertisement

ನೀರಿನ ಸಮಸ್ಯೆಗೆ ಬೇಕಿದೆ ಶಾಶ್ವತ ಪರಿಹಾರ

02:58 PM Mar 22, 2020 | Suhan S |

ದೊಡ್ಡಬಳ್ಳಾಪುರ: ಬೇಸಿಗೆ ಆರಂಭವಾಗಿದ್ದು, ಜತೆಗೆ ನೀರಿನ ಸಮಸ್ಯೆಯೂ ಹೆಚ್ಚುತ್ತಿದೆ. ಸರಬರಾಜಾಗುತ್ತಿರುವ ನೀರಿನ ಸ್ಥಿತಿಗತಿ ಅರಿಯಬೇಕಿದ್ದು, ನೀರಿನ ಮಿತ ಬಳಕೆಗೆ ಆದ್ಯತೆ ನೀಡಬೇಕಿದೆ.

Advertisement

ನಗರದಲ್ಲಿ 1.05 ಲಕ್ಷ ಜನಸಂಖ್ಯೆಯಿದ್ದು, ತಲಾ ಒಬ್ಬರಿಗೆ ದಿನಕ್ಕೆ 135 ಲೀಟರ್‌ನಂತೆ ಒಟ್ಟು 14.17 ಎಂಎಲ್‌ಡಿ (ಒಂದು ದಿನಕ್ಕೆ ದಶಲಕ್ಷ ಲೀ) ಅವಶ್ಯಕತೆಯಿದೆ. ಸದ್ಯ ತಲಾ 63 ಲೀಟರ್‌ನಂತೆ 6.61 ಎಂಎಲ್‌ಡಿ, ಕೊಳವೆ ಬಾವಿಗಳಿಂದ 4.51 ಜಕ್ಕಲಮಡಗು ಜಲಾಶಯದಿಂದ 2.10 ಎಂಎಲ್‌ಡಿ ನೀರು ಸರಬ ರಾಜು ಮಾಡಲಾಗುತ್ತಿದೆ. ಇನ್ನೂ 5.68 ಎಂಎಲ್‌ಡಿ ನೀರಿನ ಕೊರತೆಯಿದೆ. ನಗರದಲ್ಲಿ 155 ಕೊಳವೆ ಬಾವಿಗಳಿದ್ದು, 77 ಮಾತ್ರ ಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿ 5 ರಿಂದ 6 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ಜಕ್ಕಲಮಡಗು ಜಲಾಶಯದಲ್ಲಿ ಪ್ರಸ್ತುತ ಶೇಖರಣೆಯಾಗಿರುವ ನೀರಿನಮಟ್ಟ 24 ಅಡಿಗಳಿದೆ. ಈಗ ಪ್ರತಿದಿನ 2.10 ಎಂಎಲ್‌ಡಿಯಂತೆ ಸರಬರಾ ಜಾಗುತ್ತಿದೆ. ಅದರಂತೆ ಗರಿಷ್ಠ 3 ತಿಂಗಳು ಸರಬರಾಜು ಮಾಡಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ರಾಮಾಂತರ ಪ್ರದೇಶ: ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಕೆರೆಗಳಲ್ಲಿ ಹೂಳು ತಂಬಿ ನೀರು ಸಂಗ್ರಹ ಕಡಿಮೆಯಾಗಿದೆ. ಪ್ರತಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ ಸೂಕ್ತ ನಿರ್ವಹಣೆಯಿಲ್ಲದೆ ಹಲವುಘಟಕಗಳು ಮುಚ್ಚಿವೆ. ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಕಾಲಕಾಲಕ್ಕೆ ಕ್ರಿಯಾಯೋಜನೆ ರೂಪಿಸಿ, ಅನುದಾನ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿವೆ.

ಕಾರ್ಯಗತವಾಗದ ನೀರಾವರಿ ಯೋಜನೆ: ಸಧ್ಯಕ್ಕೆ ಜಕ್ಕಲಮಡು ಗುವಿನಿಂದ ನಗರಕ್ಕೆ ನೀರು ಸರಬರಾಜಾಗುತ್ತಿರುವುದರಿಂದ ಪರಿ ಸ್ಥಿತಿ ತಿಳಿಯಾಗಿದೆ. ಎತ್ತಿನ ಹೊಳೆ ಯೋಜನೆಗೆ ನಿರ್ಮಿಸ ಲಾಗುತ್ತಿರುವ ಬೈರಗೊಂಡ್ಲು ಜಲಾಶಯದ ವಿವಾದ ಇನ್ನೂ ಬಗೆಹರಿದಿಲ್ಲ. ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲೂಕುಗಳಿಗೆ ವೃಷಭಾವತಿ, ನಾಯಂಡ ಹಳ್ಳಿಯಿಂದ ಶುದ್ದೀಕರಿಸಿದ ನೀರು ಹರಿಸುವ ಯೋಜನೆ ರೂಪಿಸಲಾಗಿದೆ.

ಶುದ್ಧ ನೀರಿನ ಘಟಕ ನಿರ್ವಹಣೆಗೆ 3 ವರ್ಷ ಗುತ್ತಿಗೆ ನೀಡಲಾಗಿದೆ. ಆದರೆ ಹೆಚ್ಚು ನೀರು ವ್ಯರ್ಥವಾಗುತ್ತಿದೆ ಎಂಬ ಆರೋಪ ಗಳಿವೆ. ಹೀಗಾಗಿ ವ್ಯರ್ಥ ನೀರನ್ನು ಕೊಳವೆ ಬಾವಿ ಮರು ಪೂರಣಕ್ಕೆ ಯೋಜನೆ ರೂಪಿಸಲಾಗಿದೆ.  ಆರ್‌.ಮಂಜುನಾಥ್‌, ಪೌರಾಯುಕ್ತ

Advertisement

 

ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next