Advertisement

ಹೊಸ ಬಸ್‌ ನಿಲ್ದಾಣದ ತ್ಯಾಜ್ಯ ಕೇಂದ್ರವಾದ ಬಾವಿ ಮುಚ್ಚುಗಡೆ

03:50 AM Nov 21, 2018 | Team Udayavani |

ಕಾಸರಗೋಡು: ಹೊಟೇಲ್‌ ಸಹಿತ ವಿವಿಧೆಡೆಗಳಿಂದ ತ್ಯಾಜ್ಯ ತಂದು ತುಂಬಿಸುವ ಕೇಂದ್ರವಾಗಿ ಮಾರ್ಪಟ್ಟಿದ್ದ ನಗರದ ಹೊಸ ಬಸ್‌ ನಿಲ್ದಾಣದಲ್ಲಿದ್ದ ಬಾವಿಯನ್ನು ಮುಚ್ಚಲಾಯಿತು. ಜಿಲ್ಲಾಧಿಕಾರಿ ಡಾ|ಡಿ.ಸಜಿತ್‌ ಬಾಬು ಅವರು ಕಾಸರಗೋಡು ನಗರಸಭಾ ಕಾರ್ಯದರ್ಶಿಗೆ ಬಾವಿ ಮುಚ್ಚುವಂತೆ ನಿರ್ದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾತ್ರಿ ಹೊತ್ತು ಬಾವಿಯಲ್ಲಿ ತುಂಬಿದ್ದ ತ್ಯಾಜ್ಯಕ್ಕೆ ಮಣ್ಣು ತುಂಬಿ ನೆಲ ಸಮತಟ್ಟು ಮಾಡಲಾಯಿತು. ಸಾರ್ವಜನಿಕ ದೂರು ಪರಿಹಾರ ಅವಲೋಕನಾ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಡಾ|ಸಜಿತ್‌ಬಾಬು ನಗರಸಭಾ ಕಾರ್ಯದರ್ಶಿಗೆ ಬಾವಿ ಮುಚ್ಚುವಂತೆ ನಿರ್ದೇಶ ನೀಡಿದ್ದರು. ಈ ನಿರ್ದೇಶ ಪ್ರಕಾರ ಬಾವಿ ಮುಚ್ಚಲಾಯಿತು.

Advertisement

ರಸ್ತೆ ಬದಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ತಂದು ಹಾಕುತ್ತಿರುವ ದೃಶ್ಯಗಳನ್ನು ಮೊಬೈಲ್‌ಗ‌ಳಲ್ಲಿ ಚಿತ್ರೀಕರಿಸಿ ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಜಿಲ್ಲಾ ಆಡಳಿತೆ ಹೊಸದಾಗಿ ವಾಟ್ಸಪ್‌ ಸೌಕರ್ಯವನ್ನು ಏರ್ಪಡಿಸಿದೆ. ಅದು ಜಾರಿಗೊಂಡ ಬಳಿಕ 45 ದೂರುಗಳು ಲಭಿಸಿವೆ. ಈ ಪೈಕಿ 25 ದೂರುಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ತ್ಯಾಜ್ಯ ಸಂಸ್ಕರಣೆ ವಿಷಯಗಳಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಲು ಪಂಚಾಯತ್‌ ಮತ್ತು ನಗರಸಭಾ ಮಟ್ಟಗಳಲ್ಲಿ ತುರ್ತು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ನಿರ್ದೇಶ ನೀಡಿದ್ದಾರೆ.

ಕಾಸರಗೋಡು ನಗರಸಭೆ, ಮಂಜೇಶ್ವರ, ಮಂಗಲ್ಪಾಡಿ, ಮೊಗ್ರಾಲ್‌ ಪುತ್ತೂರು, ಕುಂಬಳೆ ಮತ್ತು ಚೆಂಗಳ ಗ್ರಾಮ ಪಂಚಾಯತ್‌ಗಳು ಈ ವಿಷಯದಲ್ಲಿ ಇನ್ನಷ್ಟು ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ತ್ಯಾಜ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದಲೂ ದೂರು ಸ್ವೀಕರಿಸಲಾಗುವುದು. ನಗರದಲ್ಲಿ ಹೆಚ್ಚು ತ್ಯಾಜ್ಯ ತಂದು ಉಪೇಕ್ಷಿಸುವ ಸ್ಥಳಗಳಲ್ಲಿ ಸಿ.ಸಿ. ಟಿವಿ ಕ್ಯಾಮರಾಗಳನ್ನು ಸ್ಥಾಪಿಸುವ ಮೂಲಕ ತ್ಯಾಜ್ಯ ತಂದು ಹಾಕುವವರ ಗುರುತು ಹಿಡಿದು ಕಠಿಣ ಕ್ರಮಕೈಗೊಳ್ಳುವಂತೆಯೂ ನಗರಸಭಾ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ನಿರ್ದೇಶ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next