Advertisement

ಹೆದ್ದಾರಿ ಎರಡೂ ಬದಿ ಕಣ್ಣಿಗೆ ರಾಚುವ ತ್ಯಾಜ್ಯ

05:07 PM Nov 19, 2021 | Team Udayavani |

ಅರಸೀಕೆರೆ: ಸಾರ್ವಜನಿಕರ ಸಹಭಾಗಿತ್ವದಲ್ಲಿ ನಗರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಬೆಂಗಳೂರು ಮಾರ್ಗವಾಗಿ ಅರಸೀಕೆರೆಗೆ ಬರುವ ಪ್ರಯಾಣಿಕರಿಗೆ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಕಣ್ಣಿಗೆ ರಾಚುವಂತೆ ಕಸದ ತ್ಯಾಜ್ಯ ಸುರಿದು ಸ್ವಾಗತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.

Advertisement

ಸಾಮಾಜಿಕ ಜವಾಬ್ದಾರಿ ಅರಿಯದ ಕೆಲವರು ತಮ್ಮ ಮನೆಯ ಸಮಾರಂಭಗಳ ಬಳಿಕ ರಾಶಿ, ರಾಶಿ ಊಟದ ಎಲೆಯನ್ನು ಮತ್ತೆ ಕೆಲವರು ಉಪಯುಕ್ತವಲ್ಲದ ಬಟ್ಟೆ ಬರೆ ಸೇರಿ ತಮ್ಮ ಮನೆಯ ತ್ಯಾಜ್ಯವನ್ನು ರಾಷ್ಟ್ರೀಯ ಹೆದ್ದಾರಿ ಬದಿ ಸುರಿದು ಕೈತೊಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕ ಬೇಕಾದವರು ಯಾರು ಎಂಬುದು ಸದ್ಯದ ಪ್ರಶ್ನೆಯಾಗಿದೆ.

ತಿಪ್ಪೆಯಂತಾಗಿವೆ: ನಗರ ವ್ಯಾಪ್ತಿಗೆ ಕೂದಲೆಳೆ ಅಂತರದಲ್ಲಿ ಸಾಲು ಸಾಲಾಗಿ ಕಸದ ರಾಶಿ ಇದೆ. ಆದರೆ, ಈ ಪ್ರದೇಶ ನಗರ ವ್ಯಾಪ್ತಿಗೆ ಸೇರುವುದಿಲ್ಲ. ಹಾಗಾಗಿ ನಗರಸಭೆ ಆರೋಗ್ಯ ನಿರೀಕ್ಷಕರು ಇತ್ತ ತಿರುಗಿ ನೋಡುತ್ತಿಲ್ಲ. ಮತ್ತೂಂದೆಡೆ ಹೆದ್ದಾರಿ ಇಲಾಖೆ ಅಧಿಕಾರಿಗಳು ರಸ್ತೆ ಅಭಿವೃದ್ಧಿ ದುರಸ್ತಿ ಇಷ್ಟೇ ನಮ್ಮ ಕೆಲಸ ಎನ್ನುವ ಮನಸ್ಥಿತಿ ಹೊಂದಿದ್ದು ಈ ಕಾರಣಗಳಿಂದಾಗಿ ಹೆದ್ದಾರಿ ಬದಿಯ ಪಾದಚಾರಿ ರಸ್ತೆಗಳು ತಿಪ್ಪೆಯಂತಾಗಿವೆ.

ಇದನ್ನೂ ಓದಿ;- 40 ಪರ್ಸೆಂಟ್ ಆರೋಪ: ರಾಜ್ಯ ಸರ್ಕಾರ ವಜಾ ಮಾಡವಂತೆ ಸಿದ್ದರಾಮಯ್ಯ ಆಗ್ರಹ

ದುರ್ವಾಸನೆ: ನಗರಕ್ಕೆ ಆಗಮಿಸುವ ಅಥವಾ ನಗರದಿಂದ ನಿರ್ಗಮಿಸುವ ಪ್ರಯಾಣಿಕರು ಹೆದ್ದಾರಿ ಬದಿಯ ಈ ಸೌಂದರ್ಯ ನೋಡಲಾರದೆ ಕಣ್ಣು ಮೂಗು ಮುಚ್ಚಿಕೊಂಡು ಸಾಗುವ ದೃಶ್ಯ ತಾಲೂಕು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಎಸೆದಿರುವ ಎಲೆಯಲ್ಲಿ ಆಹಾರ ಪದಾರ್ಥಗಳು ಕೊಳೆತು ನಾರುತ್ತಿದ್ದು ಸುಮಾರು 200 ಮೀ. ಗೂ ಮುನ್ನವೇ ಕೆಟ್ಟ ವಾಸನೆ ಬರುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನವೂ ಸಾವಿರಾರು ವಾಹನ ಓಡಾಡುತ್ತಿದ್ದು ಎಲ್ಲರೂ ಈ ವಾಸನೆಯನ್ನು ಸೇವಿಸಿಯೇ ಮುಂದೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ.

Advertisement

ಈ ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಿರುಗಿ ನೋಡದೆ ಇರುವುದು ದುರಾದೃಷ್ಟಕರ ಸಂಗತಿ. ಹೆದ್ದಾರಿ ಇಲಾಖೆ ಹಾಗೂ ನಗರಸಭೆ ಪರಸ್ಪರ ಬೆಟ್ಟು ತೋರುತ್ತಾ ನೈರ್ಮಲ್ಯಕ್ಕೆ ಆಸ್ಪದ ನೀಡಿಲ್ಲ. ಈಗಾಗಲೇ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದಷ್ಟೇ ಅಲ್ಲದೆ ಮುಂದೆ ಈ ರೀತಿ ಯಾರು ತ್ಯಾಜ್ಯವನ್ನು ತಂದು ಹಾಕದಂತೆ ನೋಡಿಕೊಳ್ಳುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

 “ ಪರಿಸರವನ್ನು ಸ್ವತ್ಛವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ನಮ್ಮ ಮನೆ ಅಂಗಳದಂತೆ ಸ್ವತ್ಛವಾಗಿಟ್ಟುಕೊಳ್ಳಬೇಕು. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಪರಿಸರಕ್ಕೆ ಹಾನಿ ಮಾಡುವವರಿಗೆ ತಕ್ಕ ದಂಡನೆ ನೀಡದೆ ಇರುವುದರಿಂದ ಅಶುಚಿತ್ವ ತಾಂಡವವಾಡಲು ಕಾರಣ”

ದರ್ಶನ್‌, ರೋಟರಿ ಸಂಸ್ಥೆ ಅಧ್ಯಕ.

“ಕಂತೇನಹಳ್ಳಿ ಕೆರೆ ಏರಿ ಮೇಲಿನ ನಿರ್ವಹಣೆ ನಗರಸಭೆಯದ್ದಲ್ಲ. ಆದರೂ, ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಈಗಾಗಲೇ ಸಂಗ್ರಹವಾಗಿರುವ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.” ಸಿ.ಗಿರೀಶ್‌, ನಗರಸಭೆ ಅಧ್ಯಕ್ಷರು

 ನಗರಸಭೆಗೆ ಸೂಕ್ತ ನಿರ್ದೇಶನ

 ಪರಿಸರ ಸ್ವತ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಹೆದ್ದಾರಿ ಬದಿಯ ತ್ಯಾಜ್ಯ ವಿಲೇವಾರಿ ಮಾಡಿ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ನಗರಸಭೆ ಹೆದ್ದಾರಿ ಹಾಗೂ ಸಣ್ಣ ನೀರಾವರಿ ಇಲಾಖೆಗೆ ನಿರ್ದೇಶನ ನೀಡುತ್ತೇನೆ. ಅಲ್ಲದೇ, ಕೂಡಲೇ ಕ್ರಮ ಕೈಗೊಳ್ಳುತ್ತೇನೆಂದು ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next