Advertisement

ತುಂಗಭದ್ರಾ ಹಿನ್ನೀರು ಪ್ರದೇಶದ ಹಳ್ಳಿಗಳ ಜನರಿಗೆ ಎಚ್ಚರಿಕೆ

08:01 PM Aug 08, 2019 | Sriram |

ಕೊಪ್ಪಳ: ರಾಜ್ಯದ ವಿವಿಧೆಡೆ ಮಳೆಯ ಆರ್ಭಟದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ಒಳ ಹರಿವಿನ ಪ್ರಮಾಣ‌ ಹೆಚ್ಚಗಾಗಿದ್ದು ಡ್ಯಾಂ ಹಿನ್ನೀರಿನ ಪ್ರದೇಶ 14 ಹಳ್ಳಿಗಳ ಜನರು ಮುಂಜಾಗೃತವಾಗಿ ಸುರಕ್ಷಾ ಸ್ಥಳದಲ್ಲಿರುವಂತೆ ಕೊಪ್ಪಳ ತಹಸೀಲ್ದಾರ ಎಚ್ಚರಿಕೆ ಸಂದೇಶ ನೀಡಿದ್ದಾರೆ.

Advertisement

ಹಿನ್ನೀರು ಪ್ರದೇಶದಲ್ಲಿ 14 ಹಳ್ಳಿಗಳ ಜನರು ನದಿಪಾತ್ರದ ಸ್ಥಳದಲ್ಲಿ ಉಳಿಮೆ ಮಾಡುವುದು, ಜಾನುವಾರು ಮೇಯಿಸಲು ತೆರಳುವುದು ಮಾಡುವಂತಿಲ್ಲ. ಡ್ಯಾಂಗೆ ಒಳ ಹರಿವಿನ ಪ್ರಮಾಣ ಹೆಚ್ಚಗಾಗಿದ್ದರಿಂದ ಯಾವುದೇ ಕ್ಷಣದಲ್ಲೂ ನೀರು ನುಗ್ಗುವ ಸಾಧ್ಯತೆ ಇರುತ್ತದೆ. ಈ ಕುರಿತು ಜನರು ಜಾಗೃತರಾಗಿ ಮುಂಚಿತವೇ ಸುರಕ್ಷಾ ಸ್ಥಳದಲ್ಲಿ ಇರಬೇಕು. ಈ ಕುರಿತು 14 ಹಳ್ಳಿಯಲ್ಲಿ ಡಂಗೂರ ಸಾರಿಸಲಾಗಿದೆ. ಜನರು ಜಾಗೃತರಾಗುವಂತೆ ಅವರು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next