Advertisement

ಬಯಸಿದೆ ನಿನ್ನ ನಾನು

07:27 PM Sep 30, 2019 | mahesh |

ನಿನಗೆ ನನ್ನ ಮೇಲೆ ಅರ್ಥವಿಲ್ಲದ ಸಿಟ್ಟು, ನಿನ್ನ ಛಟ ಲಿ, ನಿನ್ನ ಬರ್ತ್‌ ಡೇಗೆ ನಾನು ಕೊಡಿಸಿದ ಕಿವಿಯೋಲೆ ಧರಿಸಿರುವ ಚಿತ್ರ ಬದಲಾಯಿಸಿಲ್ಲ, ಹಾಗೇ ಇದೆ!

Advertisement

“ಹದಿನೈದು ದಿನಗಳಾಯ್ತಲ್ಲ ನೀನು ನನ್ನೊಂದಿಗೆ ಟೂ ಬಿಟ್ಟು ?ಮನಸ್ಸಾದರೂ ಹೇಗೆ ಬಂತು ಹೀಗೆ ಮಾತನಾಡದೇ ಮೌನವೆಂಬ ಶಿಕ್ಷೆ ಕೊಡಲು?

ಪಿಜಿ ಡಿಪಾರ್ಟ್ಮೆಂಟ್ ಲ್ಲಿ ಬರೀ ನಮ್ಮಿಬ್ಬರದೇ ಚರ್ಚೆ ಅಂದುಕೊಂಡರೆ ಅಲ್ಲ ,ಕ್ಯಾಂಪಸ್‌ ಇಡೀ ನಮ್ಮದೇ ಮಾತು ! ಮೊನ್ನೆ , “ನಿಮ್ಮಿಬ್ಬರನ್ನು ಒಟ್ಟಿಗೆ ಕಾಣದ ಈ ಕ್ಯಾಂಟೀನ್‌ ಯಾಕೋ ಸಪ್ಪೆ ಸಪ್ಪೆ,ಹೋಗ್ಲಿ ನೀವೇ ಬಿಟ್ಟುಕೊಡಿ,ಆ ಹುಡುಗೀನ ಮಾತಾಡ್ಸಿ ? ‘ಅಂತ ಭಟ್ಟರೂ ಬೇಸರಿಸಿಕೊಂಡರು-

ನಿಜ ಹೇಳು, ನಿನಗೆ ನನ್ನೊಂದಿಗೆ “ಸೇ’ ಹೇಳಬೇಕೊಂತ ಇಲ್ವ ? ನಿನಗೆ ನನ್ನ ಮೇಲೆ ಅರ್ಥವಿಲ್ಲದ ಸಿಟ್ಟು, ನಿನ್ನ ಛಟ ಲಿ, ನಿನ್ನ ಬರ್ತ್‌ ಡೇಗೆ ನಾನು ಕೊಡಿಸಿದ ಕಿವಿಯೋಲೆ ಧರಿಸಿರುವ ಚಿತ್ರ ಬದಲಾಯಿಸಿಲ್ಲ, ಹಾಗೇ ಇದೆ! ಮುನಿಸು ಬೇಡ ಕಣೆ, ಸೆಮಿನಾರ್‌ನಲ್ಲಿ ನಿನ್ನ ಪೇಪರ್‌ ಪ್ರಸೆಂಟ್‌ ಮಾಡುವಾಗ ನಾನು ಇರಲಾಗಲಿಲ್ಲ, ಆದರೆ, ನಾನು ಅಸಹಾಯಕನಿದ್ದೆ, ಕೊನೆಯ ಗಳಿಗೆಯಲ್ಲಿ ಸ್ಕ್ರ ಬ್‌ ಆಗಿ ಹೋಗಬೇಕಾಯ್ತು. “ಪಬ್ಲಿಕ್‌ ಎಕ್ಸಾಮ್‌ನ ಕೊನೆಯ ಪೇಪರ್‌ ಸಹಾಯ ಮಾಡಿ ಸಾರ್‌’ ಅಂತ ಒಂದು ರಿಕ್ವೆಸ್ಟ್‌ ಬಂದಾಗ ನಿರಾಕರಿಸಲಾಗಲಿಲ್ಲ. ಕಾರಣ ಕೇಳ್ಳೋಕ್ಕೂ ತಾಳ್ಮೆಯಿಲ್ಲದೆ ನೀನು ಮುಖ ಊದಿಸಿಕೊಂಡೆ,ಹಾಂ, ಸುಮ್ಮನೆ ಹೇಳಬಾರದು, ನಿನ್ನ ಪ್ರಸೆಂಟೇಶನ್‌ ಅದ್ಭುತವಾಗಿತ್ತು…ಫೀಲಿಂಗ್‌ ವೆರಿ ಪ್ರೌಡ್‌ ಆಫ್ ಯೂ. ಅಚ್ಚರಿಯಾಯ್ತಾ ?ನಿನ್ನ ವಾಚನದ ಪೂರಾ ವಿಡಿಯೋ ರೆಕಾರ್ಡಿಂಗ್‌ ಗೆ ವ್ಯವಸ್ಥೆ ಮಾಡಿದ್ದೆ . ನಂಬಿಕೆ ಇಲ್ಲಾಂದ್ರೆ ನಾಳೆ ಹೇಗೂ ಶನಿವಾರ ಕ್ಲಾಸ್‌ ಇಲ್ಲ, ಲೈಬ್ರರಿಗೆ ಬಾ,

ನಿನ್ನ ಪೇಪರ್‌ ಬಗ್ಗೆ ನೂ ಡಿಸ್ಕಸ್‌ ಮಾಡೋಣವಂತೆ, ಮೌನಮುರಿದು ನನ್ನ ಎದೆಭಾರ ಕಡಿಮೆ ಮಾಡು. ಈ ಶಿಕ್ಷೆ ಸಾಕಾಗಿದೆ’- ಹೀಗಂತ, ಮೆಸೇಜ್‌ ಅವಳಿಗೆ ಕಳುಹಿಸಿದರೂ,ಮಹರಾಯ್ತಿ ಉತ್ತರಿಸುವಳ್ಳೋ ಇಲ್ಲವೋ ಎಂಬ ಗೊಂದಲ.

Advertisement

” ಸಾರಿ ಕಣೋ, ಕಾರಣ ಕೇಳದೆ ತಪ್ಪು ಮಾಡಿದೆ, ತುಂಬ ಹೇಳಬೇಕು ನಾನು, ಫ್ರೀ ಇದೀಯಾ ? ನಾಳೆಯವರೆಗೆ ಕಾಯಲಾಗದು’
ಹೀಗೆ ಬಂದ ಅವಳ ಉತ್ತರ, ಅವನ ಮುಖದಲ್ಲಿ ಗೆಲುವು ಮೂಡಿಸಿತು.

-ರಾಜಿ, ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next