Advertisement

ಮಾರಣಾಂತಿಕ ಕ್ಯಾನ್ಸರ್‌.. ನಡೆಯಲು ಆಗದ ಸ್ಥಿತಿ: ಶಾರುಖ್ ಖಾನ್ ಭೇಟಿ ಆಗುವುದೇ ಇವರ ಕೊನೆ ಆಸೆ

05:24 PM May 20, 2023 | Team Udayavani |

ಮುಂಬಯಿ: ಸಿನಿಮಾಗಳು ನಮ್ಮ ಮೇಲೆ ತುಂಬಾ ಪರಿಣಾಮ ಬೀರುತ್ತವೆ. ಸಿನಿಮಾ ನಟ – ನಟಿಯರನ್ನು ಒಮ್ಮೆಯಾದರೂ ನಾವು ಜೀವನದಲ್ಲಿ ಭೇಟಿ ಆಗಬೇಕೆನ್ನುವ ಅಭಿಮಾನ ಮೂಡುತ್ತದೆ. ಕೆಲವರು ತನ್ನ ಮೆಚ್ಚಿನ ನಟರ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿರುತ್ತಾರೆ. ಅಂಥದ್ದೇ ಒಬ್ಬ ಅಪ್ಟಟ ಅಭಿಮಾನಿಯೊಬ್ಬರ ಸ್ಟೋರಿಯಿದು.

Advertisement

ಶಾರುಖ್ ಖಾನ್‌ ಯಾರಿಗೆ ಗೊತ್ತಿಲ್ಲ ಹೇಳಿ. ವಯಸ್ಸು 57 ದಾಟಿದರೂ ಇಂದಿಗೂ 17 ವರ್ಷದ ಯುವಕನಂತೆ ಫೈಟ್‌, ಆ್ಯಕ್ಟ್‌ ಎರಡನ್ನೂ ಸಮಾನವಾಗಿ ಮಾಡಬಲ್ಲ ಬಾಲಿವುಡ್‌ ನ ಕಿಂಗ್‌ ಖಾನ್‌ ಗೆ ಅಭಿಮಾನಿಗಳ ದೊಡ್ಡ ವರ್ಗವೇ ಇದೆ. ಅಂಥ ದೊಡ್ಡ ಅಭಿಮಾನಿಗಳ ಸಾಗರದಲ್ಲಿ ಒಂದು ಪುಟ್ಟ ಅಲೆಗಳಂತೆ ಇರುವವರು ಪಶ್ಚಿಮ ಬಂಗಾಳದ ನಾರ್ತ್ 24 ಪರಗಣ‌ ಜಿಲ್ಲೆಯ 60 ವರ್ಷದ ವೃದ್ಧೆ ಶಿವಾನಿ ಚಕ್ರವರ್ತಿಯೂ ಒಬ್ಬರು.

ಶಾರುಖ್‌ ಖಾನ್‌ ಎಂದರೆ ವಿವರಸಲಾಗದ ಅಭಿಮಾನ.. ನಾವು – ನೀವು ಶಾರುಖ್‌ ಖಾನ್‌ ಅಥವಾ ಇತರ ನಟ – ನಟಿಯರ ಅಭಿಮಾನಿಗಳು ಆಗಿರಬಹುದು. ಆದರೆ ಇವರ ಅಭಿಮಾನ ನಮ್ಮ ನಿಮ್ಮಂತೆ ಖಂಡಿತ ಅಲ್ಲ. ಶಿವಾನಿ ಚಕ್ರವರ್ತಿ ಮಾರಣಾಂತಿಕ ಕ್ಯಾನ್ಸರ್‌ ನಿಂದ ಬಳಲುತ್ತಿದ್ದಾರೆ. ಇನ್ನೇನು ಕೆಲ ತಿಂಗಳೇ ಬದುಕುಬಹುದು ಎನ್ನುವ ಸ್ಥಿತಿಯಲ್ಲಿದ್ದಾರೆ. ಆದರೆ ಅವರ ಕೊನೆಯ ಆಸೆ ಶಾರುಖ್‌ ಖಾನ್‌ ರನ್ನು ಭೇಟಿ ಆಗಬೇಕೆನ್ನುವುದು.!

ಹೌದು ಶಿವಾನಿ ಚಕ್ರವರ್ತಿ ಶಾರುಖ್‌ ಖಾನ್‌ ಅವರ ದೊಡ್ಡ ಅಭಿಮಾನಿ. ಅವರ ಎಲ್ಲಾ ಸಿನಿಮಾವನ್ನು ನೋಡಿದ್ದಾರೆ. ಎದ್ದು ನಡೆಯಲು ಕಷ್ಟವಾದರೂ ಇತ್ತೀಚೆಗೆ ತೆರೆಕಂಡ  ʼಪಠಾಣ್‌ʼ ಸಿನಿಮಾವನ್ನು ಥಿಯೇಟರ್‌ ಗೆ ಹೋಗಿ ನೋಡಿದ್ದಾರೆ. 2000 ಇಸವಿಯಿಂದ ಇದುವರಗೆ ಬಂದ ಅವರ ಎಲ್ಲಾ ಸಿನಿಮಾದ ಪೋಸ್ಟರ್‌ ಗಳನ್ನು ತನ್ನ ಬೆಡ್‌ ರೂಮ್‌ ನ ಗೋಡೆಗಳಲ್ಲಿ ಅಂಟಿಸಿ ಇಟ್ಟಿದ್ದಾರೆ. ಶಾರುಖ್‌ ಖಾನ್‌ ಅವರು ಕೆಕೆಆರ್‌ ತಂಡವನ್ನು ಖರೀದಿಸಿದಾಗಿನಿಂದ ಅವರು ಐಪಿಎಲ್‌ ನಲ್ಲಿ ಕೆಕೆಆರ್‌ ತಂಡವನ್ನು ಸರ್ಪೋಟ್‌ ಮಾಡುವುದು ಮಾತ್ರವಲ್ಲದೆ, ಕೆಕೆಆರ್‌ ನ ಎಲ್ಲಾ ಪಂದ್ಯವನ್ನು ಶಾರುಖ್‌ ಗಾಗಿ ನೋಡುತ್ತಾರೆ.

Advertisement

“ನಾನು ಕೊನೆಯ ದಿನಗಳನ್ನು ಲೆಕ್ಕ ಹಾಕುತ್ತಿದ್ದೇನೆ. ವೈದ್ಯರು ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದಿದ್ದಾರೆ.ನನ್ನ ಜೀವನದ ಕೊನೆ ಆಸೆ ಎಂದರೆ ಅದು ಶಾರುಖ್‌ ಅವರನ್ನು ಮುಖತಃ ಭೇಟಿ ಆಗಬೇಕು” ಎಂದು ಶಿವಾನಿ ಚಕ್ರವರ್ತಿ ಹೇಳುತ್ತಾರೆ.

ಶಾರುಖ್‌ ಅವರಿಗೆ ಬಂಗಾಳಿ ಆಹಾರ ಇಷ್ಟ. ನಾನು ಅವರಿಗೆ ಮನೆಯಲ್ಲಿ ಬಂಗಾಳಿ ಅಡುಗೆಯನ್ನು ಮಾಡಿ ಬಡಿಸಬೇಕೆಂದು ಹೇಳುತ್ತಾ ಕಣ್ಣಂಚಿನಲ್ಲಿ ನೀರು ತುಂಬಿ ಮಾತನಾಡಿದರು.

ಶಾರುಖ್‌ ಅವರಿಗೆ ಹೇಳಲು ಬಯಸುವ ಒಂದು ವಿಚಾರ ಏನಾದರೂ ಇದ್ದರೆ ಹೇಳಿ ಎಂದಾಗ ಅವರು, “ನನ್ನ ಮಗಳನ್ನು ಆಶೀರ್ವದಿಸುವಂತೆ ನಾನು ಅವರನ್ನು ಕೇಳಲು ಬಯಸುತ್ತೇನೆ. ನಾನು ಅವನನ್ನು ನೋಡಲು ಬಯಸುತ್ತೇನೆ ಮತ್ತು  ಅವರ ಸರಳತೆಯನ್ನು ನೋಡಲು ಬಯಸುತ್ತೇನೆ.” ಎಂದರು.

ಈಗಾಗಲೇ  ಶಿವಾನಿ ತನ್ನ ಚಿಕಿತ್ಸೆಯ ಭಾಗವಾಗಿ ಹತ್ತು ಕೀಮೋ ಸೆಷನ್‌ಗಳಿಗೆ ಒಳಗಾಗಿದ್ದಾರೆ. ಅವರು ಬೆನ್ನುಹುರಿಯ ಸಮಸ್ಯೆಯಿಂದ ಬಳಲುತ್ತಿದ್ದು, ಬೆನ್ನು ಬಗ್ಗಿದ್ದು ನಡೆಯಲು ಕಷ್ಟವಾಗುತ್ತಿದೆ.

ಶಿವಾನಿ ಅವರ ಮಗಳು ಈ ಕುರಿತು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಶಾರುಖ್‌ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.

ಈ ಹಿಂದೆ ಶಾರುಖ್‌ ಅವರ ಅರುಣಾ ಪಿಕೆ ಎಂಬ ಅಭಿಮಾನಿ 2017 ರಲ್ಲಿ ನಿಧನರಾಗಿದ್ದರು.  ಶಾರುಖ್‌ ಅವರನ್ನು ಭೇಟಿಯಾಗಲು ಬಯಸಿದ್ದ ಅವರಿಗೆ ಶಾರುಖ್‌ ವಿಡಿಯೋ ಮೆಸೇಜ್‌ ಹಾಗೂ ಕಾಲ್‌ ಮಾಡಿದ್ದರು. ಆ ವೇಳೆ ಅರುಣಾ ಆಸ್ಪತ್ರೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next