Advertisement

ಲಾಂಚ್ ಸಿಬಂದಿಗೆ ಪಾವತಿಯಾಗದ ವೇತನ; ಶಾಸಕ ಹಾಲಪ್ಪ ಆಕ್ರೋಶ

04:11 PM Sep 12, 2022 | Vishnudas Patil |

ಸಾಗರ: ಶರಾವತಿ ಹಿನ್ನೀರಿನ ಹೊಳೆಬಾಗಿಲು ಸೇರಿದಂತೆ ಬೇರೆ ಬೇರೆ ಕಡವುಗಳಲ್ಲಿನ ಲಾಂಚ್‌ಗಳಲ್ಲಿ ಅರೆಕಾಲಿಕ ವೃತ್ತಿ ನಡೆಸುತ್ತಿರುವ ಸಿಬಂದಿಗೆ ವೇತನ ಪಾವತಿ ಮಾಡದಿರುವ ಕುರಿತು ಸೋಮವಾರ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ವಿಧಾನಸೌಧದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಎಸ್. ಅಂಗಾರ ಅವರ ಸಮ್ಮುಖದಲ್ಲಿ ಫೋನ್ ಮೂಲಕ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಕಳೆದ ಒಂದು ವರ್ಷದಿಂದ ಲಾಂಚ್‌ನಲ್ಲಿ ಅರೆಕಾಲಿಕ ವೃತ್ತಿ ಮಾಡುತ್ತಿರುವ 17ಕ್ಕೂ ಹೆಚ್ಚು ಸಿಬಂದಿಗೆ ವೇತನ ಪಾವತಿ ಮಾಡಿಲ್ಲ. ಸಾರ್ವಜನಿಕರು ವೇತನ ಕೊಡಿಸಲು ಪ್ರತಿಭಟನೆ ಮಾಡಿದ್ದಾರೆ. ಸಿಬಂದಿಗಳು ವೇತನ ಕೊಡದಿರುವ ಬಗ್ಗೆ ನನ್ನ ಗಮನಕ್ಕೂ ತಂದಿಲ್ಲ. ಅವರಿಂದ ಕೆಲಸ ಮಾಡಿಸಿಕೊಂಡು ವೇತನ ಕೊಡಲು ಏಕೆ ಸತಾಯಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಸರ್ಕಾರ ಮತ್ತು ಸಚಿವರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಸ್ಪಂದಿಸಿದ ಸಚಿವ ಎಸ್. ಅಂಗಾರ ಸಿಬಂದಿಗೆ ವೇತನ ಕೊಡದೆ ಇರುವ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ. ಇನ್ನು ಎರಡು ದಿನಗಳೊಳಗೆ ಬಾಕಿ ಇರಿಸಿಕೊಂಡಿರುವ ವೇತನ ಬಿಡುಗಡೆ ಮಾಡುವಂತೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next