Advertisement

ಮತದಾನಕ್ಕೆ ಭಯ ಹುಟ್ಟಿಸಿದರೆ ಜೈಲು ಗ್ಯಾರಂಟಿ

11:09 AM Apr 04, 2023 | Team Udayavani |

ಶಿಡ್ಲಘಟ್ಟ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಮುಕ್ತ ಹಾಗೂ ಪಾರದರ್ಶಕವಾಗಿ ಮತದಾನ ಮಾಡಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿ ಕೊಂಡಿದೆ. ಮತದಾರರಿಗೆ ಮತದಾನ ಮಾಡಲು ಅಡ್ಡಿಪಡಿಸಿದರೆ ಅಥವಾ ಭೀತಿವುಂಟು ಮಾಡಿದರೆ ಗೂಂಡಾಕಾಯ್ದೆಯಡಿ ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎನ್‌.ಎಂ.ನಾಗರಾಜ್‌ ಎಚ್ಚರಿಸಿದರು.

Advertisement

ನಗರದ ಕೋಟೆ ವೃತ್ತದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿ ಸಿದ್ದ ಮತದಾನ ಅರಿವು ಕಾರ್ಯಕ್ರಮದಲ್ಲಿ ಮಾತ ನಾಡಿದರು. ಜಿಲ್ಲೆಯಲ್ಲಿ ದೌರ್ಜನ್ಯ ಮತ್ತು ದಬ್ಟಾಳಿಕೆ ನಡೆಸಿ ಮತದಾನ ಮಾಡಲು ಯಾವುದೇ ರೀತಿಯ ಅವಕಾಶಗಳು ನೀಡುವುದಿಲ್ಲ ಮತದಾರರಿಗೆ ಮುಕ್ತ ವಾತಾವರಣದಲ್ಲಿ ಮತದಾನ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತದಾರರಿಗೆ ಯಾರಾದರೂ ಬೆದರಿಸಿದರೆ ಅಥವಾ ಆಮಿಷಗಳನ್ನು ಒಡ್ಡಿದರೆ ಕಾನೂನು ರೀತಿಯ ಕ್ರಮ ಜರುಗಿಸ ಲಾಗುವುದು ಎಂದು ಹೇಳಿದರು.

ಚುನಾವಣೆ ವೇಳೆಯಲ್ಲಿ ಯಾರಿಗಾದರೂ ಮತ ದಾನ ಮಾಡಿ ಆದರೆ ಗೌಪ್ಯತೆಯನ್ನು ಬಹಿರಂಗಪಡಿಸ ಬೇಡಿ ಎಂದು ಸಲಹೆ ನೀಡಿದ ಜಿಲ್ಲಾಧಿಕಾರಿಗಳು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕೆಲವರು ದ್ವೇಷ ಸಾಧಿಸುವ ಅವಕಾಶಗಳಿವೆ ಎಂದ ಜಿಲ್ಲಾಧಿ ಕಾರಿಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಮೊದಲು ಕಾನೂನು ಅಡಿ ಕ್ರಮ ಜರುಗಿಸುತ್ತೇವೆ. ಅಲ್ಲಿಗೂ ಅವರು ಬದಲಾಗದಿದ್ದ ಪಕ್ಷದಲ್ಲಿ ಕ್ಷೇತ್ರದಿಂದ ಗಡಿಪಾರು ಮಾಡಿ ಅನಂತರ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.80 ಮತದಾನ ದಾಖಲಾಗಿದೆ. ಆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶ ದಲ್ಲಿ ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿÓ ಲಾಗುತ್ತಿದೆ. ನಾಗರಿಕರು ಮತದಾನ ಮಾಡುವ ಮೂಲಕ ದೇಶ ಕಟ್ಟುವ ಕೆಲಸವನ್ನು ಮಾಡಬೇಕು ಅದುವೇ ನಿಜವಾದ ದೇಶಪ್ರೇಮ ಎಂದರು.

ಈ ಬಾರಿಯ ಚುನಾವಣೆಯಲ್ಲಿ ಯಾರೂ ಸಹ ಮತದಾನದಿಂದ ವಂಚಿತರಾಗಬಾರದೆಂದು ಕೇಂದ್ರ ಚುನಾವಣಾ ಆಯೋಗವು ಅನೇಕ ರೀತಿಯ ಅನುಕೂಲಗಳನ್ನು ಕಲ್ಪಿಸಿದ್ದು ವಿಶೇಷವಾಗಿ 80 ವರ್ಷ ದಾಟಿದ ವಯೋವೃದ್ದರೂ ಮನೆಯಿಂದಲೇ ಮತ ದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾನ ಮಾಡಲು ಬಯಸುವವರು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡುವ ಕೆಲಸವನ್ನು ಆಗಬೇಕು ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾನ ದಿಂದ ವಂಚಿತಗೊಳ್ಳಬಾರದು ಎಂದರು.

Advertisement

ಈ ವೇಳೆ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಪಂ ಸಿಇಒ ಪ್ರಕಾಶ್‌ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಡಿ.ಎಲ್‌. ನಾಗೇಶ್‌, ಚುನಾವಣಾಧಿಕಾರಿ ಜಾವೀದಾ ನಸೀಮಾ ಖಾನಂ, ನಗರಸಭೆ ಪೌರಾಯುಕ್ತ ಆರ್‌. ಶ್ರೀಕಾಂತ್‌, ಸಿಪಿಐ ನಂದಕುಮಾರ್‌, ಪಿಎಸ್‌ಐ ಸುನೀಲ್‌ಕುಮಾರ್‌, ವೇಣುಗೋಪಾಲ್‌, ಎಎಸ್‌ಐ ನವಾಜ್‌ ಇತರರು ಹಾಜರಿದ್ದರು.

ಏ.11ರವರೆಗೂ ನೋಂದಣಿಗೆ ಅವಕಾಶ : ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ದೂರು ಸಾಮಾನ್ಯವಾಗಿ ಕೇಳಿ ಬರುತ್ತಿದೆ ಅದನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಇದಿಯೋ ಅಥವಾ ಇಲ್ಲವೋ ಎಂಬುದರ ವಿಚಾರವನ್ನು ತಿಳಿದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಜತೆಗೆ 18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ತಮ್ಮ ಹೆಸರುಗಳನ್ನು ಮತದಾನ ಪಟ್ಟಿಯಲ್ಲಿ ನೋಂದಣಿಗೆ ಏ. 11 ವರೆಗೆ ಅವಕಾಶ ಕಲ್ಪಿಸಲಾಗಿದೆ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಾಗರಾಜ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next