Advertisement

ಮತದಾನ: ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

02:26 AM Apr 13, 2019 | Team Udayavani |

ಕುಂದಾಪುರ: ಚುನಾವಣೆಯ ಮುಂಚಿನ ದಿನ ರಾತ್ರಿ ಬೆಂಗಳೂರಿನಿಂದ ಕರಾವಳಿಗೆ ತೆರಳಲು ವಿಶೇಷ ರೈಲಿನ ವೇಳಾಪಟ್ಟಿ ಬಿಡುಗಡೆಯಾಗಿದೆ.

Advertisement

ಬೆಂಗಳೂರಿನಿಂದ ತೆರಳುವ ಖಾಸಗಿ ಬಸ್‌ಗಳು ವಿಪರೀತ ದರ ಏರಿಸಿರುವ ಹಿನ್ನೆಲೆಯಲ್ಲಿ ಪರವೂರಿನಲ್ಲಿರುವ ಮತದಾರರು ಮತ ಚಲಾಯಿಸಲು ಅನುವಾಗುವಂತೆ ಸಾರಿಗೆ ವ್ಯವಸ್ಥೆ ಕುರಿತು ಗಮನ ಹರಿಸುವಂತೆ ಚುನಾವಣ ಆಯೋಗ ಕೆಎಎಸ್‌ಆರ್‌ಟಿಸಿ ಮತ್ತು ರೈಲ್ವೇ ಇಲಾಖೆಗೆ ಸೂಚನೆ ನೀಡಿತ್ತು. ಈಗ ನೈಋತ್ಯ ರೈಲ್ವೇ ವಲಯದಿಂದ ಬೆಂಗಳೂರಿಂದ ಮಂಗಳೂರು, ಉಡುಪಿ, ಕಾರವಾರಕ್ಕೆ ತತ್ಕಾಲ್‌ ಸ್ಪೆಷಲ್‌ ಎಂಬ ಹೆಸರಿನ ರೈಲು ಹೊರಡಿಸಲು ಸೂಚನೆ ನೀಡಲಾಗಿದೆ.

ಇದು ಎ. 17ರಂದು ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಯಶವಂತಪುರದಿಂದ ಹೊರಡಲಿದೆ. ಕಾರವಾರಕ್ಕೆ ಎ. 18ರಂದು ಸಂಜೆ 3.30ಗೆ ತಲುಪಲಿದೆ. ಕಾರವಾರದಿಂದ ಸಂಜೆ 6 ಗಂಟೆಗೆ ಮರುಪ್ರಯಾಣ ಬೆಳೆಸಿ ಬೆಂಗಳೂರಿಗೆ ಶುಕ್ರವಾರ 10.35ಕ್ಕೆ ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next