Advertisement

ನಾಸ್ತಿಕರಿಗೆ ಅವಕಾಶ ನೀಡಿದ್ದಕ್ಕೆ ಮತದಾರರ ಉತ್ತರ: ಸಜೀವನ್‌

11:42 PM Jun 29, 2019 | Team Udayavani |

ಕುಂಬಳೆ: ಶಬರಿಮಲೆ ಶ್ರೀ ಅಯ್ಯಪ್ಪನ ಬ್ರಹ್ಮಚರ್ಯೆಯನ್ನು ಕೆಡಿಸಲು ನಾಸ್ತಿಕ ಯುವತಿಯರನ್ನು ಬಲವಂತವಾಗಿ ಕ್ಷೇತ್ರಕ್ಕೆ ಪ್ರವೇಶಿಸಲು ಮುಂದಾದ ಎಡರಂಗ ಸರಕಾರಕ್ಕೆ ಮತದಾರರು ಸೂಕ್ತ ಉತ್ತರ ನೀಡಿದ್ದಾರೆ.

Advertisement

ಸಿ.ಪಿ.ಎಂ.ಪಕ್ಷದ ಹಿಂಸೆಯ ಭಯದಲ್ಲಿ ಅಭಯದ ಆಶ್ರಯ ಪಡೆಯಲು ರಾಜ್ಯದ ನಿಷ್ಪಕ್ಷ ಮತದಾರರು ಕೇರಳದಲ್ಲಿ ಐಕ್ಯರಂಗಕ್ಕೆ ಮತ ನೀಡಿದ್ದಾರೆ. ಅಲ್ಲದೆ ಸಿಪಿಎಂ ಮತಗಳು ಐಕ್ಯರಂಗದ ಪಾಲಾದವು.ಈ ಕಾರಣದಿಂದ ರಾಜ್ಯದಲ್ಲಿ ಮಾತ್ರ 20 ರಲ್ಲಿ 19 ಸ್ಥಾನ ಪಡೆಯಲು ಐಕ್ಯರಂಗಕ್ಕೆ ಸಾಧ್ಯವಾಗಿದೆ ಎಂಬುದಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿ ವಿ.ಕೆ. ಸಜೀವನ್‌ ಹೇಳಿದರು.

ಪೈವಳಿಕೆ ಪಂಚಾಯತ್‌ ಬಿಜೆಪಿ ಸಮಿತಿ ವತಿಯಿಂದ ಬಾಯಾರು ಪದವಿನಲ್ಲಿ ಜರಗಿದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ 6 ರಾಜ್ಯಗಳಲ್ಲಿ 100 ಶೇಕಡಾ, 13 ರಾಜ್ಯಗಳಲ್ಲಿ 50 ಶೇಕಡಾ ಬಿಜೆಪಿ ಮತ ಪಡೆದಿದೆ.ಕಾಂಗ್ರೆಸ್‌ ಆಳ್ವಿಕೆ ಇರುವ ವ ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಬಿಜೆಪಿ ಅಜೇಯ ಜಯಗಳಿಸಿದೆ. 8 ಶೇಕಡಾ ಅಲ್ಪಸಂಖ್ಯಾಕ‌ರ ಮತದೊಂದಿಗೆ ದೇಶದಾದ್ಯಂತ 28 ಕೋಟಿ ಮತ ಪಡೆದು 303 ಸ್ಥಾನಗಳೊಂದಿಗೆ ಪಕ್ಷ ಅಧಿಕಾರಕ್ಕೇರಿದೆ. ಪ್ರದಾನಿ ನರೇಂದ್ರ ಮೋದಿಯವರ ಆಡಳಿತವನ್ನು ಅಪಪ್ರಚಾರದ ಮೂಲಕ ಸೋಲಿಸಲು ಪ್ರತಿಪಕ್ಷ ಮತ್ತು ಕೆಲವು ಮಾಧ್ಯಗಳು ಶ್ರಮಿಸಿದರೂ ವಿಫಲವಾಗಿ ಪ್ರದಾನಿ ಮೋದಿಯವರು ಮತ್ತೆ ವಿಶ್ವಮಟ್ಟದಲ್ಲಿ ಸಮರ್ಥ ನಾಯಕನಾಗಿ ಮಿಂಚಿ ಜನಪ್ರಿಯರಾಗಿರುವರು.ಬಡವರಿಗೆ ಮನೆ,ಶೌಚಾಲಯ,ವಿದ್ಯುತ್‌,ಗ್ಯಾಸ್‌, ವಿಮಾ ಯೋಜನೆಗಳನ್ನು ನೀಡಿ ಜನಪ್ರಿಯರಾಗಿರುವರು.ಮುಂದಿನ ದಿನಗಳಲ್ಲಿ ದೇಶದಾದ್ಯಂತ ಎಲ್ಲರಿಗೂ ಕುಡಿಯುವ ನೀರು ಮತ್ತು ಕೃಷಿಕರಿಗೆ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.

ಪೈವಳಿಕೆ ಪಂಚಾಯತ್‌ ಬಿಜೆಪಿ ಸಮಿತಿ ಅಧ್ಯಕ್ಷ ಸದಾಶಿವ ಚೇರಾಲ್ ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ಯುವಮೋರ್ಚಾ ರಾಜ್ಯ ಸಮಿತಿ ಸದಸ್ಯ ಪಿ.ಆರ್‌.ಸುನಿಲ್ ಅವರು ಮಾತನಾಡಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ ,ರಾಜ್ಯ ಕೌನ್ಸಿಲ್ ಸದಸ್ಯೆ ಸರೋಜಾ ಆರ್‌.ಬಲ್ಲಾಳ್‌,ಬಿಜೆಪಿ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಯುವಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಸತ್ಯಶಂಕರ ಭಟ್,ಜಿಲ್ಲಾ ಸಮಿತಿ ಸದಸ್ಯ ಎಂ.ಹರಿಶ್ಚಂದ್ರ ಮಂಜೇಶ್ವರ ಉಪಸ್ಥಿತರಿದ್ದರು.

Advertisement

ಎ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು.ಗೋಪಾಲ ಸಪಲ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next