Advertisement

ವಚನ ಸಂರಕಣೆಗೆ ಜೀವ ಮುಡುಪಾಗಿಟ್ಟವರು ಡಾ|ಹಳಕಟ್ಟಿ

12:04 PM Jul 10, 2018 | Team Udayavani |

ಕಲಬುರಗಿ: 12ನೇ ಶತಮಾನದ ಬಸವಾದಿ ಶರಣರ ವಚನಗಳ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಅವರು ಎಂದಿಗೂ ಮರೆಯಲಾಗದ ಶರಣ ಚೇತನರು ಎಂದು ಸಾರಂಗಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.

Advertisement

ನಗರದ ಪ್ರಿಯದರ್ಶಿನಿ ಬಾಲಕಿಯರ ಪಿಯು ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾಧಕ ಶರಣರಿಗೆ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಸ್ವಾಮೀಜಿ ಮಾತನಾಡಿದರು.

ಮರೆಯಾಗುತ್ತಿದ್ದ ವಚನಗಳನ್ನು ಸಂರಕ್ಷಿಸಿ ಅವುಗಳನ್ನು ರಕ್ಷಿಸಿ ಅದಕ್ಕೆ ಪುನರ್ಜನ್ಮ ನೀಡಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಹಳಕಟ್ಟಿ ಅವರಿಂದ ವಚನ ಸಾಹಿತ್ಯ ಬೆಳಕಿಗೆ ಬಂದಿದೆ ಎಂದು ಹೇಳಿದರು.

ಉಪನ್ಯಾಸ ನೀಡಿದ ಜಯಶ್ರೀ ಚಟ್ನಳ್ಳಿ, ಡಾ| ಹಳಕಟ್ಟಿ ಅವರು ತಾಳೆಗರಿಗಳಲ್ಲಿದ್ದ ಶರಣರ ವಚನಗಳನ್ನು ಓದಿ ಸಂಶೋಧಿಸಿ ಸಂಗ್ರಹಿಸಿ ಇಡದಿದ್ದರೆ ಬಸವಣ್ಣ ಸೇರಿದಂತೆ ಯಾವ ಶರಣರ ಬಗ್ಗೆಯೂ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಡಾ| ಹಳಕಟ್ಟಿ ಅವರು ಸಂಗ್ರಹಿಸಿದ ವಚನಗಳು ಲೋಕಕ್ಕೆ ತಿಳಿವಳಿಕೆ ತಿರುಳು ತಿಳಿಸುತ್ತಿವೆ ಎಂದು ಹೇಳಿದರು.

ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ
ಪ್ರಾಚಾರ್ಯ ಭಾರತಿ ಸಂಗಾವಿ, ಪ್ರೊ| ಎಸ್‌.ಜಿ. ಕೆಲ್ಲೂರ, ವಿನೋದ ಜನವರಿ ಮಾತನಾಡಿದರು.

Advertisement

ಸಂಸ್ಥೆ ಕಾರ್ಯದರ್ಶಿ ಮಾರುತಿರಾವ ಮಾಲೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ| ಶೀಲಾ ಸಿದ್ದರಾಮ, ಆರ್‌.ಸಿ. ಘಾಳೆ, ಬಸವರಾಜೇಂದ್ರ ಗುಂಡೆ ತಡಕಲ್‌, ಶಿವಶರಣ ದೇಗಾಂವ, ಪ್ರೊ| ಶೋಭಾದೇವಿ ಚೆಕ್ಕಿ, ಜಮಖಂಡಿಯ ಸರಸ್ವತಿ ಸಬರದ, ಅಫಜಲಪುರದ
ಮಹೇಶ ಅಲೇಗಾಂವ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಪರಮೇಶ್ವರ ಶಟಕಾರ, ಎಸ್‌.ಎಂ. ಪಟ್ಟಣಕರ, ಹಣಮಂತ್ರಾಯ ಅಟ್ಟೂರ, ಶ್ರೀಕಾಂತ ಪಾಟೀಲ ತಿಳಗೂಳ, ಡಾ| ಬಾಬುರಾವ ಶೇರಿಕಾರ, ಡಾ| ಅಶೋಕ ಜೀವಣಗಿ, ಸೂರ್ಯಕಾಂತ ಸೊನ್ನದ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next