Advertisement

ವಿಠ್ಠಲ ಹೇರೂರ ದಿಟ್ಟಹೋರಾಟಗಾರ

03:57 PM Apr 11, 2017 | |

ಕಲಬುರಗಿ: ಕೋಲಿ ಸಮಾಜದ ಕಂಡಿರುವ ಮಹಾನ್‌ ಮತ್ತು ದಿಟ್ಟ ನಾಯಕ ದಿ.ವಿಠ್ಠಲ ಹೇರೂರು. ಅವರು ಹೋರಾಟವನ್ನೇ  ಉಸಿರಾಗಿಸಿಕೊಂಡು ಮುಂದಡಿ ಇಟ್ಟವರು.  ಅವರು ಎಲ್ಲ ಕೆಳ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಗೂ ಬಿಜೆಪಿ ರಾಜ್ಯ ಸಹ ವಕ್ತಾರ ಶಶೀಲ ನಮೋಶಿ ಹೇಳಿದರು. 

Advertisement

ನಗರದ  ನೆಹರು ಗಂಜ್‌ನ ಹನುಮಾನ್‌ ಮಂದಿರ ಆವರಣದಲ್ಲಿ ನಡೆದ ದಿ| ವಿಠ್ಠಲ ಹೇರೂರ ಅವರ 65ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಅವರು ಮಾತನಾಡಿದರು. ಎಲ್ಲ ವರ್ಗದ ಜನರ ವಿಶ್ವಾಸ ಗೆದ್ದಿದ್ದ ಅವರು, ಹಲವಾರು ಸಮಸ್ಯೆಗಳ ವಿರುದ್ಧ ಹೋರಾಟ ಮಾಡಿದ್ದಾರೆ.

ಸದಾ ಎಲ್ಲ ವರ್ಗದ ಚಿಂತನೆ ಮಾಡುತ್ತಿದ್ದರು. ಅವರೊಬ್ಬ ಮಾನವೀಯ ಕಳಕಳಿ ಇರುವ ವ್ಯಕ್ತಿಯಾಗಿದ್ದರು ಎಂದು ಹೇಳಿದರು. ಡಾ| ಬಿ.ಆರ್‌. ಅಂಬೇಡ್ಕರ್‌ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಿದ್ದೇ ಕಾಂಗ್ರೆಸ್‌ ಎಂದು ಆರೋಪಿಸಿದ ಶಶೀಲ ನಮೋಶಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರು ಸಂಸದರಾಗಲು ಟಿಕೆಟ್‌ ನೀಡದೆ ಕಾಂಗ್ರೆಸ್‌ ಅನ್ಯಾಯ ಮಾಡಿತ್ತು. 

ಮಹಿಳೆಯರು ಹಾಗೂ ಹಿಂದುಳಿದ ವರ್ಗದವರ ಪರವಾಗಿ ಅಪಾರವಾಗಿ ಅಂಬೇಡ್ಕರ್‌ ಶ್ರಮಿಸಿದ್ದರು. ಕಾಂಗ್ರೆಸ್‌ ನಿಂದ ಅಭಿವೃದ್ಧಿ ಪರ ಚಿಂತಕರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುವ ಕೆಲಸ ನಡೆಯುತ್ತಿದೆ ಎಂದು ಟೀಕಿಸಿದರು. ಮಹಾನಗರ ಪಾಲಿಕೆ ಸದಸ್ಯ ಶರಣು ಮೋದಿ ಮಾತನಾಡಿ, ದಿ| ವಿಠ್ಠಲ ಹೇರೂರ ಅವರ ದಾರಿಯಲ್ಲಿ ಸಮಾಜ ಬಾಂಧವರು ಮುನ್ನಡೆಯಬೇಕು ಎಂದು ಹೇಳಿದರು. 

ದಿಗಂಬರ ಎನ್‌.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ಚನ್ನವೀರ, ನಂದಕೀಶೋರ ನಾಗಭುಜಂಗೆ, ಉದ್ದಿಮೆದಾರ ಬಸವರಾಜ ಗಾಜರೆ, ಜಗನ್ನಾಥ, ಗಜೇಂದ್ರ ಹಾಗೂ ವಿಠ್ಠಲ ಹೇರೂರ ಅಭಿಮಾನಿಗಳು ಪಾಲ್ಗೊಂಡಿದ್ದರು. ಸಂಗಮೇಶ ಕಾರ್ಯಕ್ರಮ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next